ಕರಾವಳಿ

ಗ್ರಾಮಕರಣಿಕರೋರ್ವರು ಪಡೆದ ಲಂಚ ರೂ.30 ಸಾವಿರ
ವಾಪಸ್ ಕೊಡಿಸಿದ್ದು ರೂ.35 ಸಾವಿರ..!



ಪುತ್ತೂರು: ಗ್ರಾಮಕರಣಿಕರೋರ್ವರು ಕಡತ ವಿಲೇವಾರಿಗೆ 30 ಸಾವಿರ ರೂ ಲಂಚ ಪಡೆದುಕೊಂಡಿದ್ದು ಲಂಚ ಪಡೆದ ಮೊತ್ತಕ್ಕೆ 5 ಸಾವಿರ ಸೇರಿಸಿ ಮರಳಿಸುವಂತೆ ಶಾಸಕ ಅಶೋಕ್ ರೈ ಸೂಚಿಸಿದ್ದಾರೆ. ಪುತ್ತೂರು ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.


ಜಮೀನಿಗೆ ಸಂಬಂಧಪಟ್ಟ ಕಡತವನ್ನು ವಿಲೇವಾರಿ ಮಾಡುವಾಗ ಗ್ರಾಮ ಕರಣಿಕ ಲಂಚ ಪಡೆದಿದ್ದ. ನಾನು ಲಂಚ ಕೊಡುವುದಿಲ್ಲ ಶಾಸಕರಲ್ಲಿ ದೂರು ನೀಡುವುದಾಗಿ ವ್ಯಕ್ತಿ ಹೇಳಿದಾಗ ಗ್ರಾಮ ಕರಣಿಕ ನನಗೆ ಶಾಸಕರ ಪರಿಚಯ ಇದೆ ಎಂದು ಹೇಳಿದ್ದ. ಲಂಚ ಕೊಟ್ಟ ವ್ಯಕ್ತಿ ಶಾಸಕರಲ್ಲಿ ದೂರು ನೀಡಿದ್ದು 24 ಗಂಟೆಯೊಳಗೆ ಪಡೆದ ಮೊತ್ತಕ್ಕೆ 5 ಸಾವಿರ ಸೇರಿಸಿ ಮರಳಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!