ಕರಾವಳಿ

ಬೆಳ್ತಂಗಡಿ: ಯುವಕನ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳ ಬಂಧನ



ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಉಜಿರೆ ಬಳಿ ಎ. 4ರಂದು ಸಂಜೆ ಚಾರ್ಮಾಡಿ ಕಕ್ಕಿಂಜೆಯ ಮಹಮ್ಮದ್ ಜಾಹೀರ್ ಎಂಬವರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾಹೀರ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನo.27/2023 ಕಲಂ 323,341,506 ಜೊತೆಗೆ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟತ್ತಾಡಿಯ ದಿನೇಶ್, ನಿತೇಶ್ ಮತ್ತು ಮುಂಡಾಜೆಯ ಸಚಿನ್ ಮತ್ತು ಸೋಮಂತಡ್ಕದ ಅವಿನಾಶ್ ಎಂಬವರನ್ನು‌ ಪೊಲೀಸರು ಬಂಧಿಸಿದ್ದಾರೆ.

ಜಾಹೀರ್ ಮತ್ತು ಪರಿಚಯದ ಹಿಂದೂ ಯುವತಿ ಒಂದೇ ಬಸ್ಸಿನ ಒಂದೇ ಸೀಟ್ ನಲ್ಲಿ ಕುಳಿತುಕೊಂಡು ಪರಸ್ಪರ ಮಾತನಾಡಿದ್ದಕ್ಕೆ ನಾಲ್ವರು ಹಲ್ಲೆ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!