ಕರಾವಳಿಕ್ರೈಂ

ಉಪ್ಪಿನಂಗಡಿ: ಹಣಕ್ಕೆ ಬೇಡಿಕೆಯಿಟ್ಟು ವ್ಯಕ್ತಿಯನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ; ಕೊಲೆ ಬೆದರಿಕೆ



ಹಣದ ಬೇಡಿಕೆ ಇಟ್ಟು ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳ ತಂಡ ಅಪಹರಿಸಿ ಕೊಲೆ ಬೆದರಿಕೆಯೊಡ್ಡಿದ ಆರೋಪ ಘಟನೆ ಜನವರಿ19 ರ ರಾತ್ರಿ ಕಡಬ ತಾಲೂಕಿನ ಉಪ್ಪಿನಂಗಡಿ ಸಮೀಪದ ಕೊಯಿಲ ಎಂಬಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ .

ಅಪಹರಣಕ್ಕೊಳಗಾದ ಸಹೋದರಲ್ಲಿ ಓರ್ವ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಮತ್ತೋರ್ವ ಅಪಹರಣಕಾರರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.


ಕೊಯಿಲ ಗ್ರಾಮದ ನಿವಾಸಿ ನಿಝಾಮ್ ಮತ್ತು ಶಾರೂಖ್ ಎಂಬವವರು ಅಪಹರಣಕ್ಕೊಳಗಾದವರು ಎಂದು ತಿಳಿದುಬಂದಿದೆ.

ಅಪಹರಣಕ್ಕೊಳಗಾದ ಓರ್ವ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ನಾವು ಕೇಳಿರುವ ಹಣ ನೀಡಿದರೆ ಮತ್ತೋರ್ವನನ್ನು ಬಿಡುಗಡೆಗೊಳಿಸುತ್ತೇವೆ ಎಂದು ತಂಡ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.


ಅಪರಿಚಿತರ ತಂಡ ಇಬ್ಬರನ್ನೂ ಮಂಗಳೂರಿನ ಮಲ್ಲೂರಿಗೆ ಕರೆದೊಯ್ದಿದ್ದರು ಎನ್ನಲಾಗಿದ್ದು
ಈ ಘಟನೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರ ವಿಚಾರಣೆಯ ಬಳಿಕ ಸತ್ಯ ಸಂಗತಿ ಬಯಲಾಗಲಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!