ಕರಾವಳಿಕ್ರೈಂ

ಮುಂಡೂರು ಯುವತಿಯ ಬರ್ಬರ ಕೊಲೆ ಪ್ರಕರಣ: ಪ್ರೀತಿ ನಿರಾಕರಿಸಿದ್ದೇ ಕೊಲೆಗೆ ಕಾರಣ ಬೆಳ್ಳಾರೆಯ ಯುವಕ ಅರೆಸ್ಟ್

ಪುತ್ತೂರು: ಮನೆಗೆ ನುಗ್ಗಿ ಯುವತಿಯೋರ್ವಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮುಂಡೂರು ಗ್ರಾಮದ ಕಂಪದಲ್ಲಿ ಜ17ರಂದು ನಡೆದಿದೆ.

ಕಂಪದ 22 ವರ್ಷದ ಯುವತಿಯನ್ನು ಯುವಕನೋರ್ವ ಚೂರಿ ಇರಿದು ಕೊಲೆ ಮಾಡಿದ್ದಾನೆ.

ಬೆಳ್ಳಾರ ಸಮೀಪದ ಕನಕಮಜಲು ನಿವಾಸಿ ಉಮೇಶ ಎಂಬಾತ ಮನೆಗೆ ನುಗ್ಗಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಉಮೇಶ ಜಯಶ್ರೀಯನ್ನು ಕೆಲವು ಸಮಯಗಳಿಂದ ಪ್ರೀತಿಸುತಿದ್ದು ಇತ್ತೀಚೆಗೆ ಜಯಶ್ರೀ ಅವರು ಉಮೇಶನ ಗುಣ ನಡತೆ ಸರಿ ಇಲ್ಲ ಎಂದು ಆತನ ಜೊತೆ ಮಾತನಾಡದೆ ದೂರವಾಗಿದ್ದಳು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಉಮೇಶ ಜಯಶ್ರೀ ಮನೆಗೆ ನುಗ್ಗಿ ಹತ್ಯೆ ಮಾಡಿರುವುದಾಗಿ ಸಂಶಯಿಸಲಾಗಿದೆ.
ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!