ಜಿಲ್ಲೆರಾಜ್ಯ

ಕೊನೆಗೂ ಸ್ಯಾಂಟ್ರೋ ರವಿ ಅರೆಸ್ಟ್

ಬೆಂಗಳೂರು: ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ನನ್ನು ಪೊಲೀಸರು ಗುಜರಾತ್ ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.

ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸ್ಯಾಂಟ್ರೋ ರವಿಯ ಬಂಧನಕ್ಕೆ ರಾಜ್ಯ ಪೊಲೀಸರ ವಿಶೇಷ ತಂಡವೊಂದು ಕಾರ್ಯಚರಣೆ ನಡೆಸಿ, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸ್ಯಾಂಟ್ರೋ ರವಿಯ ಕಾರು ಚಾಲಕ ಗಿರೀಶ್​ನನ್ನು ನಿನ್ನೆ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಲಾಗಿತ್ತು. ರಾಮನಗರ ಎಸ್​ಪಿ ಸಂತೋಷ್​ ಬಾಬು ನೇತೃತ್ವದ ತಂಡ ಸ್ಯಾಂಟ್ರೋ ರವಿಯ ಕಾರು ಚಾಲಕ ಗಿರೀಶ್​ನನ್ನು ಕಾರ್ಯಾಚರಣೆ ಕೈಗೊಂಡು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು.

ಸದ್ಯ ಗುಜರಾತ್‌ನಿಂದ ಸ್ಯಾಂಟ್ರೋ ರವಿಯನ್ನು ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!