ರಾಜಕೀಯರಾಜ್ಯರಾಷ್ಟ್ರೀಯ

ರಾಜಕೀಯ ಸ್ಪೋಟಕ ಸುದ್ದಿ: ಕೈ ತಪ್ಪುವ ಕ್ಷೇತ್ರಗಳಲ್ಲಿ ತಮ್ಮವರೇ ಕೈ ಅಭ್ಯರ್ಥಿಗಳು…!?
ಫಲಕಾರಿಯಾಗಲಿದೆಯೇ ಬಿಜೆಪಿ ಮಾಸ್ಟರ್ ಪ್ಲಾನ್?

ಕೈ ತಪ್ಪುವ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳಾಗಿ ತಮ್ಮದೇ ಪಕ್ಷದ ಮುಖಂಡರನ್ನು ಕಣಕ್ಕಿಳಿಸುವಂತೆ ವ್ಯವಸ್ಥೆ ಮಾಡುವ ಮೂಲಕ ರಾಜ್ಯದಲ್ಲಿ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ ಅಧಿಕಾರ ಮರಳಿ ಪಡೆಯಲು ಬಿಜೆಪಿ ಚಾಣಕ್ಯ ಎಂದೇ ಕರೆಯಲ್ಪಡುವ ರಾಷ್ಟ್ರೀಯ ನಾಯಕರೋರ್ವರು ಪ್ಲಾನ್ ಮಾಡಿದ್ದಾರೆ ಎಂಬ ಸ್ಪೋಟ ವರದಿ ರಾಜಕೀಯ ವಲಯದಲ್ಲಿ ವೈರಲ್ ಆಗುತ್ತಿದ್ದು ಈ ಪ್ಲಾನ್ ಕರ್ನಾಟಕದಲ್ಲೂ ವರ್ಕೌಟ್ ಮಾಡಲು ಶತ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಸುದ್ದಿ ಹರಡಿದೆ.


ಉಡುಪಿ, ದ.ಕನ್ನಡ ಸೇರಿದಂತೆ 22 ಕ್ಷೇತ್ರದಲ್ಲಿ ಬಿಜೆಪಿಯಲ್ಲಿದ್ದ ಎರಡನೇ ನಾಯಕರ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಂತೆ ಪ್ರಯತ್ನ ನಡೆಸಲು ಸೂಚನೆಯನ್ನು ನೀಡಲಾಗಿದೆಯಂತೆ.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಏರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿರುವುದರಿಂದ ಹಾಗೂ ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇರುವುದನ್ನು ಮನಗಂಡಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಅದಕ್ಕಾಗಿ ಮಾಸ್ಟರ್ ಪ್ಲಾನ್  ರೂಪಿಸುತ್ತಿರುವ ಬಗ್ಗೆ ಕೆಲವೊಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ಗೆಲ್ಲುವ ಸಾಧ್ಯತೆ ಕಡಿಮೆ ಇರುವ ಕ್ಷೇತ್ರಗಳ ಲೆಕ್ಕಚಾರದಲ್ಲಿ ತೊಡಗಿರುವ ಬಿಜೆಪಿಯು ಅಂತಹ ಕಡೆಗಳಲ್ಲಿ ತಮ್ಮದೇ ಪಕ್ಷದಲ್ಲಿ ಇದ್ದ ಸಮತೋಲನ ಕಾಯ್ದುಕೊಂಡಿರುವ ನಾಯಕರುಗಳ ಎದುರಾಳಿ ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವಂತೆ ಗೌಪ್ಯ ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಇದೆ. ಗೆಲುವು ಸಾಧಿಸಿದರೆ ಮತ್ತೆ ಆಪರೇಷನ್ ಕಮಲದ ಮೂಲಕ ತಮ್ಮ ಪಕ್ಷಕ್ಕೆ ಬರುವಂತವರನ್ನೇ ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು ಅದಕ್ಕಾಗಿಯೇ ಒಂದು ಪ್ರಚಾರ ಸಮಿತಿಯನ್ನೇ ತಯಾರಿ ಮಾಡಿದೆ ಎನ್ನುವ ಮಾಹಿತಿ ಇದೆ.

ತಮ್ಮ ಎರಡನೇ ನಾಯಕರ ಬಗ್ಗೆ ಎದುರಾಳಿ ಪಕ್ಷದಲ್ಲಿ ಹೆಚ್ಚು ಹೆಚ್ಚು ಪ್ರಚಾರ ನಡೆಸಿ ಟಿಕೆಟ್ ಸಿಗುವಂತೆ ಮಾಡೋದೆ ಈ ವೆಬ್ ನ್ಯೂಸ್ ಗಳ ಕೆಲಸವಂತೆ.
ಉಡುಪಿ, ದ.ಕನ್ನಡ ಜಿಲ್ಲೆಯ ಒಂದು ಕ್ಷೇತ್ರ , ಮೈಸೂರಿನ ಎರಡು ಕ್ಷೇತ್ರ , ಉತ್ತರ ಕನ್ನಡ, ಮಂಡ್ಯ ತುಮಕೂರು ಸೇರಿದಂತೆ  ಒಟ್ಟು 22 ಕಡೆಗಳಲ್ಲಿ ಈ ಪ್ಲಾನ್ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಇಂಥಹದೊಂದು ಗುಪ್‌ಚುಪ್ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಸತ್ಯ.

Leave a Reply

Your email address will not be published. Required fields are marked *

error: Content is protected !!