ಕರಾವಳಿಕ್ರೈಂ

ಉಪ್ಪಿನಂಗಡಿ: ಮಹಿಳೆಯ ಮಾನಭಂಗಕ್ಕೆ ಯತ್ನ: ತಡೆಯಲು ಬಂದ ಪತಿಯ ಮೇಲೆ ದೊಣ್ಣೆಯಿಂದ ಹಲ್ಲೆ



ಉಪ್ಪಿನಂಗಡಿ: ಪತಿಯ ಸಮ್ಮುಖದಲ್ಲೇ ಮಹಿಳೆಯ ಮಾನಭಂಗಕ್ಕೆ ಮುಂದಾದ ಯುವಕನನ್ನು ತಡೆದ ಪತಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಮುಡಿಜಾಲು ಎಂಬಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಜಮೀಲಾ ಎಂಬವರು ದೂರು ನೀಡಿದ್ದು, ಕಳೆದ ಸೋಮವಾರದಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ಅಕ್ರಮ ಪ್ರವೇಶ ಮಾಡಿದ ಸಾಹದ್ ಎಂಬಾತ ಮೈಗೆ ಕೈ ಮಾಡಿ ಮಾನಭಂಗಕ್ಕೆ ಯತ್ನಿಸಿದಾಗ ತನ್ನ ಗಂಡ ಅಬೂಬಕ್ಕರ್ ಎಂಬವರು ತಡೆಯೊಡ್ಡಿದರೆಂದೂ, ಇದರಿಂದ ಕೋಪಗೊಂಡ ಸಾಹದ್ ಮನೆಯ ಹೊರಗೆ ಹೋಗಿ ಅಲ್ಲೇ ಇದ್ದ ದೊಣ್ಣೆಯೊಂದಿಗೆ ಬಂದು ಅಬೂಬಕ್ಕರ್ ರವರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿ ದೊಣ್ಣೆಯಿಂದ ತಲೆಗೆ ಮುಖಕ್ಕೆ ಸೊಂಟಕ್ಕೆ ಹೊಡೆದನೆಂದೂ ಗಂಭೀರ ಗಾಯಗೊಂಡ ಅಬೂಬಕ್ಕರ್ ರವರನ್ನು ಇದೀಗ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಡನ ಚಿಕಿತ್ಸೆಯ ಕಾರಣಕ್ಕೆ ಆಸ್ಪತ್ರೆಗಳಿಗೆ ಅಲೆದಾಟ ನಡೆಸುವ ಅನಿವಾರ್ಯತೆಯ ಕಾರಣಕ್ಕೆ ದೂರು ನೀಡಲು ವಿಳಂಬವಾಗಿದೆ ಎಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!