Uncategorizedಕರಾವಳಿ

ಕುಂಬ್ರ ಆಶಾದೀಪ ಸಹಾಯ ಹಸ್ತದಿಂದ
ಉಚಿತ ಆಕ್ಷಿಜನ್ ಸಿಲಿಂಡರ್ ಸರ್ವೀಸ್
 




ಪುತ್ತೂರು: ಆಶಾದೀಪ ಸಹಾಯ ಹಸ್ತ ಕುಂಬ್ರ ಎಂಬ ಸಹಾಯ ಸಂಸ್ಥೆಯು ಕುಂಬ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಸುತ್ತಮುತ್ತಲಿನ ಪರಿಸದ ರೋಗಿಗಳಿಗೆ ಉಪಯೋಗಿಸಲು ಬೇಕಾದ ವೀಲ್ ಚಯರ್,ವಾಕರ್, ಏರ್ ಬೆಡ್, ವಾಟರ್ ಬೆಡ್ ಮುಂತಾದ ಉಪಕರಣಗನ್ನು ಅಗತ್ಯ ಸಂದರ್ಭದಲ್ಲಿ ನೀಡುತ್ತಿದ್ದು ಅವರ ಉಪಯೋಗ ಮುಗಿದ ನಂತರ ಹಿಂದಕ್ಕೆ ಪಡೆಯಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಈ ರೀತಿ ಬಳಸಿ ಉಪಯೋಗಕ್ಕೆ ಇಲ್ಲದ  ಯಾವುದಾದರೂ ಉಪಕರಣಗಳು ಯಾರಲ್ಲಾದರೂ ಇದ್ದರೆ ಸಂಸ್ಥೆಗೆ ಕೊಡಬಹುದು ಇದನ್ನು ಬೇಕಾದವರಿಗೆ ಕೊಡಲಾಗುತ್ತದೆ. ಸಂಘದ ಸದಸ್ಯರ  ಸ್ವಂತ ಖರ್ಚಿನಿಂದ ಪ್ರತೀ ತಿಂಗಳು ಆಯ್ದ ಕೆಲ ಕುಟುಂಬಗಳಿಗೆ ರೇಷನ್ ಕಿಟ್ ಕೂಡಾ ಕೊಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಮನೆಯಲ್ಲಿಯೇ ಕೊಡಬೇಕಾದ ಆಕ್ಸಿಜನ್ ಸಿಲಿಂಡರ್ ಸರ್ವಿಸ್ ಅನ್ನು ಉಚಿತವಾಗಿ ಸಂಘದಿಂದ ನೀಡುತ್ತಿದ್ದು ಅಗತ್ಯ ಇದ್ದವರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.. 9901889652, 9901423745,
ಅಥವಾ 9972046941 ಅನ್ನು ಸಂಪರ್ಕಿಸಬಹುದು ಎಂದು ಸಹಾಯ ಹಸ್ತದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!