ಶಿವಸೇನೆ ನಾಯಕನನ್ನು ಗುಂಡಿಕ್ಕಿ ಹತ್ಯೆ
ಪಂಜಾಬ್: ಶಿವಸೇನೆ ನಾಯಕರೊಬ್ಬರನ್ನು ದುಷ್ಕರ್ಮಿಯೋರ್ವ ಹಾಡು ಹಗಲೇ ಗುಂಡಿಕ್ಕಿ ಕೊಂದ ಘಟನೆ ವರದಿಯಾಗಿದೆ.
ಹತ್ಯೆಗೀಡಾದವರನ್ನು ಶಿವಸೇನೆಯ ನಾಯಕ ಸುಧಿರ್ ಸೂರಿ ಎಂದು ತಿಳಿದು ಬಂದಿದೆ.
ಸುಧೀರ್ ಸೂರಿಯವರು ಪಂಜಾಬ್ನ ಅಮೃತಸರಕ್ಕೆ ಭೇಟಿ ನೀಡಿದ್ದ ವೇಳೆ, ದುಷ್ಕರ್ಮಿಯೋರ್ವ ಅವರನ್ನೇ ಗುರಿಯಾಗಿಸಿ ಗುಂಡಿಕ್ಕಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸುಧೀರ್ಸೂರಿಯವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.