ಕರಾವಳಿ

ಮಾಡಾವು: ಹೊಳೆಗೆ ತ್ಯಾಜ್ಯದ ಕಟ್ಟು ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಪಂಚಾಯತ್



ಪುತ್ತೂರು: ಕೆಯ್ಯೂರು ಗ್ರಾ.ಪಂ ವ್ಯಾಪ್ತಿಯ ಮಾಡಾವು ಹೊಳೆಗೆ ತ್ಯಾಜ್ಯ ಹಾಕಿದ ವ್ಯಕ್ತಿಗೆ ಗ್ರಾಪಂ ಅಧಿಕಾರಿಯವರು 5 ಸಾವಿರ ರೂ.ದಂಡ ವಿಧಿಸಿರುವ ಘಟನೆ ನಡೆದಿದೆ.

ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿಯೋರ್ವರು ಕಟ್ಟತ್ತಾರುನಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದು ಅಲ್ಲಿಂದ ಮತ್ತೆ ಮಂಡೆಕೋಲಿಗೆ ತೆರಳುವ ದಾರಿ ಮಧ್ಯೆ ಮಾಡಾವು ಹೊಳೆಗೆ ತ್ಯಾಜ್ಯದ ಕಟ್ಟನ್ನು ಎಸೆದಿದ್ದಾರೆ. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಗ್ರಾಪಂ ಸದಸ್ಯರುಗಳು ತ್ಯಾಜ್ಯವನ್ನು ಎಸೆದಿರುವ ಬಗ್ಗೆ ಖಚಿತಪಡಿಸಿಕೊಂಡು ವ್ಯಕ್ತಿಗೆ ರೂ.5ಸಾವಿರ ದಂಡ ವಿಧಿಸಿದ್ದಾರೆ. ತ್ಯಾಜ್ಯ ಹಾಕಿರುವ ಬಗ್ಗೆ ಬೈಕ್ ಸವಾರ ಮಂಡೆಕೋಲು ನಿವಾಸಿ ತಪ್ಪೊಪ್ಪಿಕೊಂಡಿದ್ದು ದಂಡ ಪಾವತಿಸಿ ತೆರಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!