ಜಲ ಮೂಲಗಳನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ-ದಿವ್ಯಾಪ್ರಭಾ
ಮಂಗಳೂರು: ಯುವ ಜನತೆಗೆ ಮತ್ತು ಮಕ್ಕಳಿಗೆ ಸುಸ್ಥಿರ ಅಭಿವೃದ್ಧಿ ಮತ್ತು ನೀರಿನ ಮಹತ್ವ ತಿಳಿಸಿಕೊಟ್ಟಾಗ ಮಾತ್ರ ಮುಂದಿನ ತಲೆಮಾರಿಗೆ ಶುದ್ಧ ಜಲವನ್ನು ನೀಡಲು ಸಾಧ್ಯ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಹೇಳಿದರು.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಲಸಂರಕ್ಷಣೆಯ ಬಗೆಗಿನ ಯುವ ಜಾಗೃತಿ ‘ಪೊಸ ಒಸರ್’ ಎಂಬ ರಾಷ್ಟ್ರ ಮಟ್ಟದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಮಾನವ ಬದುಕಿಗೆ ಬಹುಮುಖ್ಯ ಮೂಲ ಅವಶ್ಯಕತೆಯಾದ ಜಲ ಮೂಲಗಳನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಈ ಬಗ್ಗೆ ತಳ ಮಟ್ಟದಿಂದಲೇ ಜಾಗೃತಿಯ ಅಗತ್ಯವಿದೆ ಎಂದು ಅವರು ಹೇಳಿದರು.