ಕರಾವಳಿ

ಪುತ್ತೂರು ಯುವಜನ ಪರಿಷತ್ ನಡೆಸುವ ಪ್ರತಿಭಟನೆಗೆ ಸುಳ್ಯ ಮುಸ್ಲಿಂ ಒಕ್ಕೂಟ ಬೆಂಬಲ :ಇಕ್ಬಾಲ್ ಎಲಿಮಲೆ



ದಕ್ಷಿಣ ಕನ್ನಡ ಜಿಲ್ಲೆ ಕಾಣಿಯೂರು ನಲ್ಲಿ ಬೆಡ್‌ಶೀಟ್ ವ್ಯಾಪಾರಸ್ಥರು ಮುಸ್ಲಿಂ ಎಂಬ ಕಾರಣಕ್ಕಾಗಿ ನಡೆಸಿರುವ ಗುಂಪು ಹಲ್ಲೆ,ಕೊಲೆಯತ್ನ ಘಟನೆಯನ್ನು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ತಾಲೂಕು ಸಮಿತಿ ಸಂಚಾಲಕ ಮಹಮ್ಮದ್ ಇಕ್ಬಾಲ್ ಎಲಿಮಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಘಟನೆಗೆ ಸಂಭಂದಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಅ.28 ರಂದು ನಡೆಸುವ ಪ್ರತಿಭಟನೆಗೆ ಬೆಂಬಲ ಸೂಚಿಸುವುದಾಗಿ ಅವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ನಿಷ್ಪಕ್ಷ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!