ರಾಷ್ಟ್ರೀಯ

ಮೊಬೈಲ್ ಕಳ್ಳತನ ಒಪ್ಪಿಕೋ…ಬಾಲಕನನ್ನು ಬಾವಿಗೆ ನೇತು ಹಾಕಿ ಸಾಯಿಸುವ ಬೆದರಿಕೆ..!



ಭೋಪಾಲ್: ಮೊಬೈಲ್ ಕಳ್ಳತನದ ಆರೋಪದ ಮೇಲೆ ಬಾಲಕನೊಬ್ಬನನ್ನು ಸಾಯಿಸುವ ಉದ್ದೇಶದಿಂದ ಬಾವಿಯೊಳಗೆ ಇಳಿಬಿಟ್ಟಿದ್ದ ಘಟನೆ ಮಧ್ಯಪ್ರದೇಶದ ಛಾತ್ರಪುರ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಛಾತ್ರಪುರ್ ಜಿಲ್ಲೆಯ ಆಟ್‌ಕೋನಾದಲ್ಲಿ ಇತ್ತೀಚೆಗೆ ನಡೆದಿದೆ.

ವಿಡಿಯೊದಲ್ಲಿ ಆರೋಪಿ 14 ವರ್ಷದ ಬಾಲಕನಿಗೆ ‘ನೀನು ಮೊಬೈಲ್ ಕದ್ದಿರುವುದನ್ನು ಒಪ್ಪಿಕೊ ಇಲ್ಲವಾದರೆ ಇಲ್ಲಿಯೇ ನಿನ್ನನ್ನು ಸಾಯಿಸುತ್ತೇನೆ’ ಎಂದು ನೀರು ತುಂಬಿದ ಬಾವಿಯೊಳಗೆ ನೇತುಹಾಕಿ ಜೀವ ಬೆದರಿಕೆ ಹಾಕಿರುವುದು ಕಾಣುತ್ತದೆ. ಅಲ್ಲದೇ ಬಾಲಕ, ಆರೋಪವನ್ನು ನಿರಾಕರಿಸುತ್ತಾ ಸಾಯಿಸಬೇಡ’ ಎಂದು ಬೇಡಿಕೊಳ್ಳುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ವಿಡಿಯೊ ನೆಟ್ಟಿಗರ ಮನಕಲುಕಿದೆ.

Leave a Reply

Your email address will not be published. Required fields are marked *

error: Content is protected !!