ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಗುರುವಪ್ಪ ಮನೆಗೆ ಅರಿಯಡ್ಕ ವಲಯ ಕಾಂಗ್ರೆಸ್ನಿಂದ ಧನ ಸಹಾಯ
ಪುತ್ತೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಗುರುವಪ್ಪ ಜಾರತ್ತಾರು ಅವರ ಮನೆಗೆ ಜ.13ರಂದು ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ರೂ.10 ಸಾವಿರ ಧನ ಸಹಾಯವನ್ನು ನೀಡಲಾಯಿತು.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ರಫೀಕ್ ದರ್ಖಾಸ್, ಬೂತ್ ಅಧ್ಯಕ್ಷ ಸತೀಶ್ ಉಪಸ್ಥಿತರಿದ್ದರು. ಮೃತ ಗುರುವಪ್ಪ ಅವರ ಪತ್ನಿ ಸುಶೀಲ ಅವರು ನಗದು ಮೊತ್ತವನ್ನು ಸ್ವೀಕರಿಸಿದರು.




