ಕುಂಬ್ರ ಅಪಘಾತ: ಗಾಯಾಳು ಮನೆಗೆ ಶಾಸಕ ಅಶೋಕ್ ರೈ ಭೇಟಿ, ಕುಟುಂಬಕ್ಕೆ ಸಾಂತ್ವನ
ಪುತ್ತೂರು: ನ.1 ರಂದು ಕುಂಬ್ರದ ಅಬ್ರಾಡ್ ಹಾಲ್ ಬಳಿ ನಡೆದ ಕಾರು ಮತ್ತು ರಿಕ್ಷಾದ ನಡುವೆ ನಡೆದ ಅಫಘಾತದಲ್ಲಿ ರಿಕ್ಷಾದಲ್ಲಿದ್ದ ಬಾಲಕಿ ಹಾಗೂ ಮಹಿಳೆಯೋರ್ವರು ಮೃತಪಟ್ಟು ಆಟೋ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಇತರರು ಗಾಯಗೊಂಡ ಘಟನೆ ನಡೆದಿತ್ತು.

ಇಂದು ಮಧ್ಯಾಹ್ನ ಶಾಸಕ ಅಶೋಕ್ ರೈ ಅವರು ಆಟೋ ಚಾಲಕ ಹನೀಫ್ ರವರ ಮನೆಗೆ ಭೇಟಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ, ಇಸ್ಮಾಯಿಲ್ ಬೊಳುವಾರು ಸೇರಿದಂತೆ ಕೆಲವು ಮಂದಿ ಉಪಸ್ಥಿತರಿದ್ಧರು.



