ಉಪ್ಪಿನಂಗಡಿ: ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಮೃತ್ಯು
ಪುತ್ತೂರು: ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಮೃತಪಟ್ಟ ಘಟನೆ ಆ.2ರಂದು ನಡೆದಿದೆ.

ಇಲ್ಲಿನ ಮಠ ನಿವಾಸಿ, ಉಪ್ಪಿನಂಗಡಿಯ ಫ್ಯಾಷನ್ ವರ್ಲ್ಡ್ ಜವುಳಿ ಅಂಗಡಿಯ ಮಾಲಕ ಇಬ್ರಾಹಿಂ ಮೃತ ಸವಾರ. ಮಠದಿಂದ ಉಪ್ಪಿನಂಗಡಿಯತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಸೂರ್ಯಂಬೈಲು ಆಸ್ಪತ್ರೆ ಬಳಿ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.