ಕರಾವಳಿ

ಯಾರನ್ನು ಅರೆಸ್ಟ್ ಮಾಡಬೇಕು, ಯಾರನ್ನು ಬಿಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ  ನೀವು ಡಿಸೈಡ್ ಮಾಡ್ಬೇಡಿ..! ಮಂಗಳೂರು ಕಮಿಷನರ್ ಎಚ್ಚರಿಕೆ 

ಮಂಗಳೂರು: ಇತ್ತೀಚೆಗೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಅವರೇ ಇನ್ವೆಸ್ಟಿಗೇಷನ್ ಮಾಡಿಕೊಂಡು ಯಾವ ಪ್ರಕರಣದಲ್ಲಿ ಯಾರನ್ನು ಅರೆಸ್ಟ್ ಮಾಡಬೇಕು, ಯಾರನ್ನು ಬಿಡಬೇಕು ಎಂದು ಅವರೇ ಡಿಸೈಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅನಗತ್ಯ ಸಂದೇಶ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಂಗಳೂರು ಪೊಲೀಸ್‌ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ತನಿಖೆಯನ್ನು ಸಾಕ್ಷ್ಯಗಳ ಆಧಾರದ ಮೇಲೆ  ಪೊಲೀಸರು ಮಾಡುತ್ತಾರೆ, ಯಾರೇ ಆರೋಪಿತರ ಮೇಲೆ ಸಾಕ್ಷ್ಯ ಸಿಕ್ಕಿದರೆ ಅವರನ್ನು ಅರೆಸ್ಟ್ ಮಾಡುತ್ತಾರೆ. ಸಾಕ್ಷ್ಯ ಸಿಗದಿದ್ದರೆ ಅಂತವರನ್ನು ಅರೆಸ್ಟ್ ಮಾಡಲು ಆಗುವುದಿಲ್ಲ, ಯಾರಲ್ಲಾದರೂ, ಯಾವ ಕೇಸಲ್ಲಾದರೂ ಸಾಕ್ಷ್ಯ ಇದ್ದರೆ ನೇರವಾಗಿ ಪೊಲೀಸ್ ಠಾಣೆಗೆ ಬನ್ನಿ, ನಾವು ಆ ಸಾಕ್ಷ್ಯವನ್ನು ಪರಿಗಣಿಸುತ್ತೇವೆ, ಆರೋಪಿತರ ವಿರುದ್ಧ ಸಾಕ್ಷ್ಯ ಇದ್ದರೂ ಪರವಾಗಿಲ್ಲ, ಪೊಲೀಸರು ಹಿಡಿಯುತ್ತಿದ್ದಾರೆ ಅಂತ ಅನಿಸಿ , ನಿರಪರಾಧಿ ಎಂದು ಸಾಕ್ಷಿ ಇದ್ದರೆ ಅದೂ ಪರವಾಗಿಲ್ಲ, ಪ್ರತಿ ಸಾಕ್ಷ್ಯವನ್ನು ಕೂಡಾ ಪೊಲೀಸರು ಯಾವಾಗಲೂ ಪರಿಗಣಿಸುತ್ತಾರೆ. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ  ಇನ್ವೆಸ್ಟಿಗೇಷನ್ ಟ್ರೈ ಮಾಡಲು ಹೋದರೆ ಅದು ಕೂಡ ಒಂದು ಅಪರಾಧವಾಗುತ್ತದೆ ಮತ್ತು ನಿಮ್ಮ ವಿರುದ್ಧ ಕೂಡ ಪ್ರಕರಣ ದಾಖಲಾಗುತ್ತದೆ. ಈ ರೀತಿ ಯಾರು ಮಾಡದೆ  ಜವಾಬ್ದಾರಿಯುತವಾಗಿ ಪ್ರತಿಯೊಬ್ಬರೂ ಇರಬೇಕು ಎಂದು ಅವರು  ಎಚ್ಚರಿಕೆ ನೀಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!