ಕರಾವಳಿರಾಜಕೀಯ

ಹುಳಗಳ ಕಾಟ ಅತಿಯಾದರೆ ಮದ್ದು ಬಿಡುವ ಕೆಲಸ ಮಾಡುತ್ತೇನೆ: ಅಶೋಕ್ ರೈ

ಪುತ್ತೂರು: ವ್ಯಾಟ್ಸಪ್ ಗಳಲ್ಲಿ ಕೆಲವೊಂದು ದುಷ್ಟ ಹುಳಗಳು ಪಕ್ಷದ ನಾಯಕರ ಬಗ್ಗೆ ಕೆಟ್ಟದಾಗಿ ಬರೆಯುತ್ತಾರೆ. ಅಂಥ ಗ್ರೂಪುಗಳಿಂದ ಕಾರ್ಯಕರ್ತರು ಲೆಫ್ಟ್ ಆಗಬೇಕು. ಎರಡು ಮೂರು ಹುಳಗಳಿಂದ ಮಾತ್ರ ಈ ಕೃತ್ಯ ಆಗುತ್ತಿದೆ. ಹುಳಗಳು ಯಾರು ಎಂದೂ ಗೊತ್ತಿದೆ. ಕೆಟ್ಟ ಹುಳಗಳಿಗೆ ಮದ್ದು ಸಿಂಪಡನೆ ಮಾಡಲೂ ಗೊತ್ತಿದೆ. ಹುಳಗಳ ಕಾಟ ಅತಿಯಾದರೆ ಮದ್ದು ಬಿಡುವ ಕೆಲಸ ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ತಮ್ಮ ವಿರುದ್ಧದ ಆರೋಪಗಳಿಗೆ ಗರಂ ಆದ ಶಾಸಕರು ತಮ್ಮ ವಿರುದ್ದ ಹೇಳಿಕೆ ಕೊಡುವವರ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ಪಕ್ಷದಲ್ಲಿ ಎಲ್ಲರಿಗೂ ಸ್ಥಾನ ಮಾನ ಕೊಡಲು ಸಾಧ್ಯವಿಲ್ಲ, ಆದರೆ ಪಕ್ಷಕ್ಕೆ ಪ್ರತೀಯೊಬ್ಬ ತಳ ಮಟ್ಟದ ಕಾರ್ಯಕರ್ತನೂ ಪ್ರಮುಖರೇ ಆಗಿದ್ದಾರೆ. ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇನೆ, ಬೂತಲ್ಲಿ ಕೇಳದೆ ಒಂದೇ ಒಂದು ಅನುದಾನ ಅರ್ಜಿಗೆ ಸಹಿ ಹಾಕುವುದೇ ಇಲ್ಲ. ಕಾರ್ಯಕರ್ತರೇ ನಮಗೆ ಜೀವಾಳವಾಗಿದ್ದಾರೆ. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತ ಮಾಡಬೇಕು. ಪಕ್ಷ ಗಟ್ಟಿಯಾದರೆ ಪ್ರತೀ ಕಾರ್ಯಕರ್ತರಿಗೂ ಗೌರವ ದೊರೆಯುತ್ತದೆ ಎಂದು ಶಾಸಕರು ಹೇಳಿದರು.

Leave a Reply

Your email address will not be published. Required fields are marked *

error: Content is protected !!