ಬಂಟ್ವಾಳ: ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಮನೆಗೆ ವಿವಿಧ ಸುನ್ನಿ ಸಂಘಟನೆಗಳ ಮುಖಂಡರ ಭೇಟಿ
ಬಂಟ್ವಾಳ: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಕೊಳ್ತಮಜಲುರವರ ಮನೆಗೆ ಮೇ.31ರಂದು ವಿವಿಧ ಸುನ್ನಿ ಸಂಘಟನೆಗಳ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿ, ಮಗ್ಫಿರತ್ ಗಾಗಿ ಪ್ರಾರ್ಥನೆ ನಡೆಸಿದರು.

ಪುತ್ತೂರು ತಾಲೂಕು ಜಂಹಿಯ್ಯತುಲ್ ಉಲೆಮಾ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಜಂಹಿಯ್ಯತುಲ್ ಉಲೆಮಾ ಮುಶಾವರ ಸಮಿತಿ ಸದಸ್ಯರಾದ ಉಸ್ತಾದ್ ಬಿ.ಯಸ್ ಅಬ್ಬಾಸ್ ಮದನಿ, ಕೂರ್ನಡ್ಕ ರೇಂಜ್ ಜಂಹಿಯ್ಯತುಲ್ ಮುಹಲ್ಲಿಮೀನ್ ಅಧ್ಯಕ್ಷ ಉಸ್ತಾದ್ ಅಶ್ರಫ್ ದಾರಿಮಿ ಮೊಟ್ಟೆ ತ್ತಡ್ಕ, ಕುಂಬ್ರ ರೇಂಜ್ ಜಂಹಿಯ್ಯತುಲ್ ಮುಹಲ್ಲಿಮೀನ್ ಅಧ್ಯಕ್ಷ ಉಸ್ತಾದ್ ಹಸನ್ ಬಾಖವಿ ಓಲೆಮುಂಡೋವು, ಕೂರ್ನಡ್ಕ ರೇಂಜ್ ಮೆನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಅನ್ವರ್ ಸ್ವಾದಿಕ್ ಮೌಲವಿ ಮೊಟ್ಟೆ ತ್ತಡ್ಕ ಉಪಸ್ಥಿತರಿದ್ದರು.