ಕೊಳ್ತಿಗೆ: ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು, ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ
ಪುತ್ತೂರು: ಕೊಳ್ತಿಗೆ ಗ್ರಾಮದ ಕಣಿಯಾರ್ ಎಂಬಲ್ಲಿ ಕೆಎಫ್ ಡಿಸಿ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆ ಆನೆ ದಾಳಿಯಿಂದ ಮೃತಪಟ್ಟಿದ್ದು ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿದರು.

ಅರಣ್ಯ ಇಕಾಖೆಯಿಂದ ರೂ 15 ಲಕ್ಷ ಪರಿಹಾರ ಹಾಗೂ ಕೆಎಫ್ಡಿಸಿಯಿಂದ ಸೂಕ್ತ ಪರಿಹಾರಕ್ಕೆ ಶಾಸಕರು ಸೂಚನೆ ನೀಡಿದರು. ಶಾಸಕರು ತಮ್ಮ ವೈಯಕ್ತಿಕ ನೆಲೆಯಲ್ಲಿ 10 ,000 ರೂ ಪರಿಹಾರ ನೀಡಿದರು