ಕರಾವಳಿ

ಕೂಡುರಸ್ತೆ: ರಸ್ತೆ ಗುಂಡಿಗೆ ಕಳಚಿದ ಬೊಲೆರೋ ವಾಹನದ ಚಕ್ರ

ಪುತ್ತೂರು: ರಸ್ತೆಗೆ ತಾಗಿಕೊಂಡಿರುವ ಗುಂಡಿಗೆ ಬಿದ್ದು ಬೊಲೆರೋ ವಾಹನದ ಚಕ್ರ ಕಳಚಿದ ಘಟನೆ ತಿಂಗಳಾಡಿ ಸಮೀಪದ ಕೂಡುರಸ್ತೆಯಲ್ಲಿ ಜ.27ರಂದು ಸಂಜೆ ನಡೆದಿದೆ.

ರಸ್ತೆಯ ಬದಿಯಲ್ಲಿ ರಸ್ತೆಗೆ ತಾಗಿಕೊಂಡೇ ಅಪಾಯಕಾರಿ ಗುಂಡಿಯಿದ್ದು ಇದರಿಂದ ಇಲ್ಲಿ ಅನೇಕ ಅಪಘಾತಗಳು ನಡೆದಿರುವ ಬಗ್ಗೆ ವರದಿಯಾಗಿದೆ.

ಬೊಲೆರೋ ವಾಹನದ ಚಕ್ರ ಕಳಚಿದ ಬಳಿಕ ಯುವಕರು ಸೇರಿಕೊಂಡು ಬೊಲೆರೋ ವಾಹನವನ್ನು ಮೇಲೆತ್ತಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!