ಕರಾವಳಿ

ಪುತ್ತೂರು ಅಖಿಲ ಭಾರತ ಬ್ಯಾರಿ ಮಹಾಸಭಾ ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ

ಪುತ್ತೂರು: ಅಖಿಲ ಭಾರತ ಬ್ಯಾರಿ ಮಹಾಸಭಾ ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಜುಮ್ಮಾ ಮಸೀದಿ ಹತ್ತಿರದ ಸೀರತ್ ಕಟ್ಟಡದಲ್ಲಿ ಡಿ.31ರಂದು ನಡೆಯಿತು

ಜಿಲ್ಲಾ ಬ್ಯಾರಿ ಮಹಾಸಭೆಯ ಅಧ್ಯಕ್ಷ ಅಜೀಜ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಬ್ಯಾರಿ ಸಮುದಾಯದಲ್ಲಿ ಐ.ಎ ಎಸ್, ಐ.ಪಿ.ಎಸ್ ಅಧಿಕಾರಿಗಳನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಪ್ರತೀ ಜಮಾಅತ್ ಮಟ್ಟದಲ್ಲಿ ವಿದ್ಯಾವಂತ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಉಚಿತ ವಿದ್ಯಾಭ್ಯಾಸ ನೀಡುವ ಪ್ರಯತ್ನ ಆಗಬೇಕಾಗಿದ್ದು ಈ ನಿಟ್ಥಿನಲ್ಲಿ ಬ್ಯಾರಿ ನಿಗಮದ ತಯಾರಿಗಾಗಿ ಸರಕಾರವನ್ನು ಕೇಳಿಕೊಂಡಿದ್ದು ಸರ್ಕಾರ ಎಲ್ಲಾ ಸಮುದಾಯಕ್ಕೂ ನಿಗಮ ಮಂಡಳಿ ನೀಡಿದ್ದು, ಈ ಪ್ರಕಾರ ನಮ್ನ ಬ್ಯಾರಿ ಸಮುದಾಯಕ್ಕೆ ನೀಡಿದಾಗ ಇದರಿಂದ ಸುಮಾರು 24 ಲಕ್ಷ ಬ್ಯಾರಿ ಸಮುದಾಯದ ಮಧ್ಯೆ ಇರುವ ಅಗತ್ಯತೆ ಪೊರೈಸಲು ಸಾದ್ಯವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಜ.8ರಂದು  ಮಂಗಳೂರು ಪುರಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿಸಿಕೊಂಡರು.

ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆಯನ್ನು ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಕೆ.ಪಿ ಮಹಮ್ಮದ್ ಹಾಜಿ ಬಿಡುಗಡೆಗೊಳಿಸಿದರು.

ಪುತ್ತೂರು ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷ ಪ್ರಸಕ್ತ ಪುತ್ತೂರು ಕರವಡ್ತ ಉರೂಸ್ ಸಮಿತಿ ಅಧ್ಯಕ್ಷರೂ ಆದ ಎಲ್.ಟಿ.ರಝಾಕ್ ಹಾಜಿಯವರು ಇಂತಹಾ ಉತ್ತಮ ಕಾರ್ಯದಲ್ಲಿ ಜಮಾಅತ್ ನ ಪ್ರತೀ ಏರಿಯಾಗಳಲ್ಲಿ ಸಂಘಟನಾತ್ಮಕವಾಗಿ ಕಾರ್ಯಗತಗೊಳಿಸಿ ಬ್ಯಾರಿ ಸಮುದಾಯವನ್ನು ಎಜ್ಯುಕೇಶನ್ ನಲ್ಲಿ ಮುಂಚೂಣಿಗೆ ತರುವ ಕೆಲಸ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಬಿ.ಎ.ಶಕೂರ್ ಹಾಜಿ ಮಾತನಾಡಿ ಪ್ರತಿಯೊಬ್ಬರೂ ಇದರಲ್ಲಿ ಸಕ್ರೀಯನಾಗಿ ನಮ್ಮ ಸಮುದಾಯವನ್ನು ಬಲಪಡಿಸಲು ಶ್ರಮಿಸುವ ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧ್ಯಕಕ್ಷ ಹಾಜಿ ಅಬ್ದುಲ್ ರಹಿಮಾನ್ ಆಜಾದ್, ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ದರ್ಬೆ ಮಸೀದಿ ಅಧ್ಯಕ್ಷ ಪಿ ಬಿ ಹಸೈನಾರ್, ಕಾರ್ಯದರ್ಶಿ ಬಶೀರ್ ದರ್ಬೆ, ಉಪಾದ್ಯಕ್ಷ ಲತೀಫ್ ,ಆರ್ಲಪದವು ಅಬೂಬಕ್ಕರ್, ಮೋನು ಬಪ್ಪಳಿಗೆ, ರಜ಼ಾಕ್ ಹಾರಾಡಿ ,ಜಮಾಲ್ ಬಪ್ಪಳಿಗೆ, ಅಶ್ರಫ್ ಕಲ್ಲೆಗ, ರಶೀದ್ ಮುರ, ಇಬ್ರಾಹಿಮ್ ಚೊಯಿಸ್, ಅನ್ವರ್ ಮೌಲವಿ, ಅಶ್ರಫ್ ಸೀರತ್,
ಜಿಲ್ಲಾ ಕನ್ವಿನರ್ಗಳಾದ ಮೊಹಮ್ಮದ್ ಶಾಕಿರ್, ಹನೀಫ್ ದೇರಳಕಟ್ಥೆ, ಇಬ್ರಾಹಿಮ್ ಬಾವಾ, ಹುಸೈನ್ ಕೂಲೂರು, ಬಶೀರ್ ವಕ್ಕಾಡಿ, ಹಮೀದ್ ಕಿನ್ಯ ಉಪಸ್ಥಿತರಿದ್ದರು. ಪುತ್ತೂರು ಕನ್ವಿನರ್ ರಫೀಕ್ ದರ್ಬೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!