ಕರಾವಳಿಕ್ರೈಂ

ತಿಂಗಳಾಡಿ: ಸ್ಕೂಟರ್ ಅಪಘಾತ, ಸವಾರ ಗಂಭೀರ



ಪುತ್ತೂರು: ಸ್ಕೂಟರ್‌ವೊಂದು ಅಪಘಾತಗೊಂಡ ಸವಾರ ಗಂಭೀರ ಗಾಯಗೊಂಡ ಘಟನೆ ಸೆ.10 ರಂದು  ಮಧ್ಯರಾತ್ರಿ ತಿಂಗಳಾಡಿ ಸಮೀಪದ ತ್ಯಾಗರಾಜನಗರ ಎಂಬಲ್ಲಿ  ಸಂಭವಿಸಿದೆ. 

ಕೆಯ್ಯೂರು ಗ್ರಾಮದ ಎರಕ್ಕಳ ನಿವಾಸಿ  ಕೀರ್ತನ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ  ಆಕ್ಟೀವಾ ಸ್ಕೂಟರ್ ತ್ಯಾಗರಾಜನಗರದಲ್ಲಿ ಪಲ್ಟಿಯಾಗಿದೆ. ಪುತ್ತೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತನ್ನ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ಈ  ಅಪಘಾತ ಸಂಭವಿಸಿದೆ. 

ತೀವ್ರ ಗಾಯಗೊಂಡಿದ್ದ ಕೀರ್ತನ್ ರನ್ನು ಅದೇ ದಾರಿಯಾಗಿ ಬರುತ್ತಿದ್ದ ತ್ಯಾಗರಾಜೆಯ ಯುವಕರ ನರವಿನೊಂದಿಗೆ ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ   ಕರೆ ತಂದು ಅಲ್ಲಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ  ದಾಖಲಿಸಲಾಗಿದೆ. ಸ್ಕೂಟರ್‌ಗೆ ಯಾವುದಾದರೂ ವಾಹನ ಡಿಕ್ಕಿ ಹೊಡೆದು ಹೋಗಿರಬಹುದೇ ಅಥವಾ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿರಬಹುದೇ ಎನ್ನುವುದು ತಿಳಿದು ಬಂದಿಲ್ಲ. ಸಂಪ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!