ಕರಾವಳಿ

ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ಅಸೆಂಬ್ಲಿ ಸಮಿತಿ ಸಭೆ

ಪುತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಪುತ್ತೂರು ಸಮಿತಿ ವತಿಯಿಂದ ಮಾಸಿಕ ಸಭೆ ಪುತ್ತೂರು ವಿಮ್ ಅಧ್ಯಕ್ಷೆ ಝಹಿದಾ ಸಾಗರ್ ನೇತೃತ್ವದಲ್ಲಿ ನಡೆಯಿತು.

“ಘನತೆಯ ಸಮಾಜಕ್ಕೆ ಒಂದಾಗೋಣ” ಸದಸ್ಯತ್ವ ಅಭಿಯಾನಕ್ಕೆ ಹೊಸ ಸದಸ್ಯರನ್ನು ವಿಮ್ ಗೆ ಸೇರ್ಪಡೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ವಿಮ್ ಗೆ ಹೊಸದಾಗಿ ಸೇರ್ಪಡೆಯಾದ ಆಫೀಝ ಮತ್ತು ಮೆಹರುನ್ನಿಸಾ ಅತೂರ್ ರವರ ಸಮ್ಮುಖದಲ್ಲಿ “ಘನತೆಯ ಸಮಾಜಕ್ಕೆ ಒಂದಾಗೋಣ” ಸದಸ್ಯತ್ವದ ಅಭಿಯಾನದ ಕರ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಝಹಿದ ಸಾಗರ್ ರವರು ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದರು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಲಿಂಗ ತಾರತಮ್ಯ ನ್ಯಾಯಾಯುತವಾದ ಹೋರಾಟ ಮಾಡಲು ಅನುಮತಿ ಕೊಡದೆ ಅವರನ್ನು ಸತಾಯಿಸಿ ಅವರ ಮೇಲೆಯೇ ಕೇಸುಗಳನ್ನು ಹಾಕಿ ಸತಾಯಿಸುತ್ತಿರುವ ಈ ಕಾಲ ಘಟ್ಟದಲ್ಲಿ ರಾಜಕೀಯದಲ್ಲಿ ಮಹಿಳೆಯರು ಮುಂದುವರೆಯ ಬೇಕಾದ ಅನಿವಾರ್ಯತೆ ಮಹಿಳೆಯರಿಗೆ ಅಗತ್ಯವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ವಿಮ್ ಬೆಳವಣಿಗೆ ಮಹತ್ವವಿದೆ ಅದಕ್ಕಾಗಿ ಮೂಲೆ ಮೂಲೆಗಳಲ್ಲಿ ವಿಮ್ ಸದಸ್ಯತ್ವ ಅಭಿಯಾನ ನಡೆಸಿ ಸದಸ್ಯರನ್ನು ಸೇರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮ್ಮೂಮೆಂಟ್ (ವಿಮ್) ಪುತ್ತೂರು ಅಸೆಂಬ್ಲಿ ಉಪಾಧ್ಯಕ್ಷರಾದ ಝರೀನಾ, ಕಾರ್ಯದರ್ಶಿ ಸೌದ, ಜೊತೆ ಕಾರ್ಯದರ್ಶಿ ಫಾತಿಮಾ ನಿರ್ಮ, ಕೊಶಾಧಿಕಾರಿ ಫಾಹಿನ ಮತ್ತು ಕ್ಷೇತ್ರ ಸಮಿತಿಯ ಸದಸ್ಯರುಗಳಾದ ನುಶ್ರತ್, ಮುಂತಾಜ್ ಹಾಗೂ ನಫೀಸ ಮಠ, ನಸೀಮ ಕೆ ಎಮ್, ಅಸ್ಮ, ಪೌಝಿಯಾ ಉಪಸ್ಥಿತರಿದ್ದರು. ಸೌದ ಸ್ವಾಗತಿಸಿ ಝರೀನ ವಂದಿಸಿದರು

Leave a Reply

Your email address will not be published. Required fields are marked *

error: Content is protected !!