ಬೆಂಗಳೂರಿಗೆ ತಂಪೆರೆದ ಮಳೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊನೆಗೂ ಮಳೆ ಬಂದಿದೆ. ಮೇ.2ರಂದು ಸಂಜೆ ತುಂತುರು ಮಳೆಯಾಗಿದ್ದು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನ ನಿಟ್ಟುಸಿರು ಬಿಡುತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್, ವರ್ತೂರು, ವೈಟ್ ಫೀಲ್ಡ್, ಕಾಡುಗೋಡಿ ಸಹಿತ ಹಲವು ಕಡೆ ಮಳೆಯಾಗಿದೆ.

ಎರಡು ದಿನಗಳಿಂದ ರಾಜಧಾನಿಯಲ್ಲಿ ಉಷ್ಣಾಂಶ 35 ಡಿಗ್ರಿಗಿಂತ ಹೆಚ್ಚಿತ್ತು ಎನ್ನಲಾಗಿದೆ. ದಿಢೀರ್ ಮಳೆ ಬಂದ ಕಾರಣ ಜನರು ಮಳೆಯಲ್ಲಿ ನೆನೆದುಕೊಂಡೆ ಪ್ರಯಾಣಿಸುತ್ತಿದ್ದ ದೃಷ್ಯ ಕಂಡು ಬಂತು.





