ಮೈಸೂರು: ಮೌಲಾನ ಹಾಫಿಲ್ ಅಕ್ಮಲ್ ಬರ್ಬರ ಹತ್ಯೆ
ಮೈಸೂರು: ನಗರ ಪಾಲಿಕೆ ಮಾಜಿ ಸದಸ್ಯನ ಸಹೋದರನನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಮಾ.8ರಂದು ರಾತ್ರಿ ನಡೆದಿದೆ.
![](https://newsbites.in/wp-content/uploads/2024/03/img_20240309_1146475443662767727300499.jpg)
ಕೊಲೆಯಾದ ವ್ಯಕ್ತಿಯನ್ನು ಪಾಲಿಕೆ ಮಾಜಿ ಸದಸ್ಯ ಅಯಾಜ್ ಪಂಡು ಸಹೋದರ ಮೌಲಾನ ಹಾಫಿಲ್ ಅಕ್ಮಲ್ ಎಂದು ಗುರುತಿಸಲಾಗಿದೆ. ಮೈಸೂರಿನ ಉದಯಗಿರಿಯ ಮಾದೇಗೌಡ ವೃತ್ತ ಸಮೀಪ ಐದಕ್ಕೂ ಹೆಚ್ಚು ಮಂದಿಯ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ ಎಂದುತಿಳಿದುಬಂದಿದೆ.