ಕರಾವಳಿ

ಸೌಜನ್ಯ ಯುವಜನ ಸಂಘ ಸಾಜ: ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ 



ಪುತ್ತೂರು: ಸೌಜನ್ಯ ಯುವಜನ ಸಂಘ ಸಾಜ ಇದರ ನೂತನ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರತೀಕ್ ಸಿ.ಕೆ ಕಾಡ್ಲ ಆಯ್ಕೆಯಾಗಿದ್ದಾರೆ.

ಸಾಜ ರಾಧಾಕೃಷ್ಣ ಆಳ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕೋಶಾಧಿಕಾರಿಯಾಗಿ ತೇಜಸ್ ಪೋಳ್ನಾಯ ಕೂಟೇಲು, ಕಾರ್ಯದರ್ಶಿಯಾಗಿ ರಾಜೇಶ್ ನಾಯ್ಕ ಸಾಜ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಎಸ್ ಕಾಡ್ಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಕೆ ಕೂಟೇಲು, ಮಾಧ್ಯಮ ಪ್ರತಿನಿಧಿಯಾಗಿ ಅನಂತರಾಮ ಕೆ ಕೂಟೇಲು ಆಯ್ಕೆಯಾದರು.

ಸಮಿತಿ ಸದಸ್ಯರುಗಳಾಗಿ ಹರ್ಷ ಕಾಡ್ಲ, ಅಶ್ರಫ್ ಎಚ್, ಗುರುಪ್ರಸಾದ್ ಸರೋಳಿಕಾನ, ಫಾರೂಕ್ ಅಜ್ಜಿಕಲ್ಲು, ಜಯರಾಮ ಸರೋಳಿಕಾನ ಅವರನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ರಾಧಾಕೃಷ್ಣ ಆಳ್ವ ಸಾಜ, ಚಂದಪ್ಪ ಪೂಜಾರಿ ಕಾಡ್ಲ, ಮುರಳಿಕೃಷ್ಣ ಹಸಂತಡ್ಕ, ಗಣೇಶ್ ಭಟ್ ಸುದನಡ್ಕ, ಹಮೀದ್ ಸಾಜ, ಅಣ್ಣು ನಾಯ್ಕ ಮುರುಂಗಿ, ಹಾಗೂ ಸಂತೋಷ್ ರೈ ಹಸಂತಡ್ಕ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!