ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನ ನಡೆಸುತ್ತಿದ್ದಾರೆ- ಡಿಕೆಶಿ
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನ ನಡೆಸಿದ್ದಾರೆ ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಜನ ಶಾಂತಿ-ಸೌಹಾರ್ದತೆಗಳಿಂದ ಬದುಕುತ್ತಿದ್ದರು ಆದರೆ ಈಗ ಈ ಪ್ರಾಂತ್ಯದಲ್ಲೂ ಅವರು ಕಾನೂನು ಮತ್ತು ಸುವ್ಯವಸ್ಥೆ ಕದಡುವ ಹುನ್ನಾರದಲ್ಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಪ್ರಾಂತ್ಯದ ಎಲ್ಲ ಗ್ರಾಮಗಳ ನಿವಾಸಿಗಳಲ್ಲಿ ಪರಸ್ಪರ ಭ್ರಾತೃತ್ವದ ಭಾವನೆಗಳಿವೆ, ಅವರ ನಡುವಿನ ಸೌಹಾರ್ದತೆಯನ್ನು ಹಾಳುಮಾಡುವ ಹೊಸ ಪ್ರಯೋಗವನ್ನು ಬಿಜೆಪಿ ನಾಯಕರು ಜಾರಿಗೆ ತಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು.
![](https://newsbites.in/wp-content/uploads/2024/01/dkshi2667121226535295321.jpg)
ಪಂಚಾಯಿತಿಯು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಹೇಳಿದ್ದರೂ ಹನುಮ ಧ್ವಜ ಹಾರಿಸಿದ್ದಾರೆ. ಬಿಜೆಪಿ ನಾಯಕರೇ ಅಲ್ವಾ, ಘರ್ ಘರ್ ತಿರಂಗಾ ಅಂತ ಘೋಷಣೆ ಸಾರಿದ್ದು, ಎಲ್ಲಿ ಹೋಯಿತು ಅ ಘೋಷಣೆ? ಅವರು ರಾಷ್ಟ್ರಧ್ವಜವನ್ನು ಬಿಟ್ಟು ಹನುಮ ಧ್ವಜವನ್ನೇ ಹಾರಿಸಿಕೊಂಡಿರಲಿ ಎಂದು ಶಿವಕುಮಾರ್ ಹೇಳಿದರು.