ಕರಾವಳಿ

ಎಸ್‌ಎಂಎ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಎಸ್‌ಎಂಎ ನಡೆ ಮೊಹಲ್ಲಾ ಕಡೆ-ಸ್ವಾಗತ ಸಮಿತಿ ರಚನೆ



ಪುತ್ತೂರು: ಎಸ್‌ಎಂಎ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದಎಸ್‌ಎಂಎ ನಡೆ ಮೊಹಲ್ಲಾ ಕಡೆ ಎಂಬ ಕಾರ್ಯಕ್ರಮ ಈಸ್ಟ್ ಜಿಲ್ಲೆಯ ಎಲ್ಲಾ ಮೊಹಲ್ಲಾಗಳಲ್ಲಿ ನಡೆಯುತ್ತಿದ್ದು ಇದರ ಸಮಾರೋಪ ಸಮಾರಂಭ ಫೆ.13ರಂದು ಬೆಳಿಗ್ಗೆ ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ.

ಸುಮಾರು ಸಾವಿರಕ್ಕೂ ಮಿಕ್ಕ ಮೊಹಲ್ಲಾ ಪ್ರತಿನಿಧಿಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮದ ಸಿದ್ಧತೆಗಾಗಿ ಸ್ವಾಗತ ಸಮಿತಿಯನ್ನು ಬನ್ನೂರಿನಲ್ಲಿ ಎಸ್‌ಎಂಎ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಸಯ್ಯದ್ ಸಾದಾತ್ ತಂಙಳ್ ಕರ್ವೇಲು ಇವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಚೇರ್‌ಮೆನ್ ಆಗಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಕನ್ವೀನರ್ ಆಗಿ ಖಾಸಿಂ ಸಖಾಫಿ ವಿಟ್ಲ, ಟ್ರಶರರ್ ಆಗಿ ಯೂಸುಫ್ ಗೌಸಿಯಾ ಸಾಜ ಅವರನ್ನು ಆಯ್ಕೆ ಮಾಡಲಾಯಿತು.

ವೈಸ್ ಚೇರ್‌ಮೆನ್ ಆಗಿ ಇಸ್ಮಾಯಿಲ್ ಹಾಜಿ ಬನ್ನೂರು, ಲತೀಫ್ ಹರ್ಲಡ್ಕ, ಇಬ್ರಾಹಿಂ ಬೀಡು, ಕನ್ವೀನರ್‌ಗಳಾಗಿ ಅಶ್ರಫ್ ಸಖಾಫಿ ಕನ್ಯಾನ, ಬಶೀರ್ ಮದನಿ ಉಪ್ಪಿನಂಗಡಿ, ಉಮರ್ ವಿಟ್ಲ ಹಾಗೂ ಇಸ್ಮಾಯಿಲ್ ಕನ್ಯಾನ ಆಯ್ಕೆಯಾದರು. ಹಾಗೂ 50 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಸ್‌ಎಂಎ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಸ್ವಾಗತಿಸಿದರು.

ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯುವ ಎಸ್‌ಎಂಎ ನಡೆ ಮೊಹಲ್ಲಾ ಕಡೆ ಕಾರ್ಯಕ್ರಮದಲ್ಲಿ ಸಮಸ್ತ ಉಪಾಧ್ಯಕ್ಷರಾದ ಶೈಖುನಾ ಕೆ ಎಸ್ ಆಟ್ಟಕೋಯ ತಂಙಳ್ ಕುಂಬೊಳ್, ಪಿಎಂಎಸ್ ತಂಙಳ್ ತ್ರಿಶೂರ್ ವಿಷಯ ಮಂಡಿಸಲಿದ್ದು ಎಸ್‌ಎಂಎ ರಾಜ್ಯಾಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಜಪ್ಪು ಹಾಗೂ ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!