ಕಳ್ಳತನ ಪ್ರಕರಣದ ಆರೋಪಿ ಮಹಿಳೆ ಬಂಧನ
ಮಂಗಳೂರು: ಕುತ್ತಾರ್ ನ ಮನೆಯೊಂದರಿಂದ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೊಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
![](http://newsbites.in/wp-content/uploads/2022/10/IMG_20221031_164714.jpg)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿವಾಸಿ ಸರೋಜಾದೇವಿ ಬಂಧಿತ ಆರೋಪಿ.
ಮೂರು ತಿಂಗಳ ಹಿಂದೆ ಕುತ್ತಾರ್ ನಿವಾಸಿ ರಮೇಶ್ ಅವರ ಮನೆಯಿಂದ ಚಿನ್ನಾಭರಣ ಕಳವಾಗಿತ್ತಲ್ಲದೆ, ಮನೆ ಕೆಲಸಕ್ಕಿದ್ದ ಸರೋಜಾದೇವಿ ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.