ಕರಾವಳಿಕ್ರೀಡೆ

ಜ.13, 14: ಸರ್ವೆ ಸೌಹಾರ್ದ ವೇದಿಕೆ ವತಿಯಿಂದ ಎಸ್‌ಪಿಎಲ್ ಸೀಸನ್-8ಕ್ರಿಕೆಟ್ ಪಂದ್ಯಾಟ-ವಿವಿಧ ಸಾಮಾಜಿಕ ಕಾರ್ಯಕ್ರಮ



ಪುತ್ತೂರು: ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ 8ನೇ ವರ್ಷದ ಸರ್ವೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಶಾಲೆಗೆ ಕೊಡುಗೆ ಹಸ್ತಾಂತರ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮ ಜ.13 ಮತ್ತು ಜ.14ರಂದು ಕಲ್ಪಣೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಬ್ಲಾಸ್ಟರ‍್ಸ್ ಕೂಡುರಸ್ತೆ, ರೆಡ್ಕೋ ರೈಡರ‍್ಸ್ ಕೂಡುರಸ್ತೆ, ಕಿಂಗ್ಸ್ ಇಲೆವೆನ್ ರೆಂಜಲಾಡಿ, ಯಂಗ್ ಫೈಟರ‍್ಸ್ ನೇರೋಳ್ತಡ್ಕ, ಬಿಎಫ್‌ಸಿ ಬಡಕ್ಕೋಡಿ, ಟ್ರೋಫಿ ಫೈಟರ‍್ಸ್ ದರ್ಬೆ, ಫಿಯರ್‌ಲೆಸ್ ಫೈಟರ‍್ಸ್, ಇಂದಿರಾ ಸ್ಟ್ರೈಕರ‍್ಸ್ ಮೊದಲಾದ 8 ತಂಡಗಳು ಭಾಗವಹಿಸಲಿದೆ. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!