ಕರಾವಳಿರಾಜಕೀಯರಾಜ್ಯ

ರಾತ್ರಿ 11 ಗಂಟೆ ವರೆಗೂ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಅಶೋಕ್ ರೈ



ಪುತ್ತೂರು: ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾತ್ರಿ 11 ಗಂಟೆ ತನಕ ಕಚೇರಿಯಲ್ಲಿದ್ದು ಸಾರ್ವಜನಿಕರ ಸಮಸ್ಯೆ ಆಲಿಸುವ ಮೂಲಕ ಶಾಸಕರು ಹೊಸ ಐತಿಹ್ಯ ಬರೆದಿದ್ದಾರೆ.


ಕಳೆದ 15 ದಿನಗಳಿಂದ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕರು ಸಾರ್ವಜನಿಕರಿಗೆ ಲಭ್ಯವಾಗಿರಲಿಲ್ಲ. ಸೋಮವಾರ ಸಂಜೆ ಕಚೇರಿಯಲ್ಲಿ ಅಹವಾಲು ಸ್ವೀಕಾರ ನಡೆಯಬೇಕಿತ್ತು‌. ಕಾರ್ಯಕ್ರಮದ ಒತ್ತಡದಿಂದ ರಾತ್ರಿ 8 ಗಂಟೆಗೆ ಕಚೇರಿಗೆ ಬಂದ ಶಾಸಕರು ಕಚೇರಿಯಲ್ಲಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಶಾಸಕರು ಬರುವಾಗ ತಡವಾಗುತ್ತದೆ ಎಂದು ಕಚೇರಿಯಲ್ಲಿ ಸೇರಿದ್ದ ಜನರಿಗೆ ಮೊದಲೇ ತಿಳಿಸಿದ್ದರೂ ಬಂದವರು ಯಾರೂ ಕಚೇರಿಯಿಂದ ತೆರಳಿರಲಿಲ್ಲ. ಕಚೇರಿಯಲ್ಲಿದ್ದ ಮಹಿಳೆಯರಿಂದ ಪ್ರಥಮ ಆಧ್ಯತೆ ಮೇರೆಗೆ ಅಹವಾಲು ಸ್ವೀಕರಿಸಲಾಯಿತು.

ಬಳಿಕ ರಾತ್ರಿ 11 ಗಂಟೆ ತನಕ ಕಛೇರಿಯಲ್ಲೇ ಇದ್ದ ಶಾಸಕರು ಬಂದ ಎಲ್ಲರನ್ನೂ ಉಪಚರಿಸಿ ಅವರ ಸಮಸ್ಯಗೆ ಸ್ಪಂದಿಸಿದ್ದಾರೆ. ಸಮಸ್ಯೆ ಹೊತ್ತುಕೊಂಡು ಬಂದ ಜನರ ಸಮಸ್ಯೆ ಪರಿಹರಿಸಲು ರಾತ್ರಿ ವೇಳೆಯೂ ಸಂಬಂದಿಸಿದ ಅಧಿಕಾರಿಗಳಿಗೆ ಕರೆ ಮಾಹಿತಿ ಮಾಹಿತಿ ತಿಳಿದುಕೊಂಡರು.

Leave a Reply

Your email address will not be published. Required fields are marked *

error: Content is protected !!