ಬೆಳ್ತಂಗಡಿ: ಆನ್’ಲೈನ್ ಜಾಬ್ ಆಫರ್ ನಂಬಿ 4,25,934 ರೂ ಕಳೆದುಕೊಂಡ ಮಹಿಳೆ
ಬೆಳ್ತಂಗಡಿ: ಆನ್ ಲೈನ್ ಜಾಬ್ ಆಫರ್ ನೀಡಿ ಹಣ ಪಡೆದು ವಂಚಿಸಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಯರ್ತ್ತಡ್ಕ ನಿವಾಸಿ ಉಷಾ ಪಿ.ವಿ.(41.ವ) ಎಂಬವರು ನೀಡಿದ ದೂರಿನಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
![](https://newsbites.in/wp-content/uploads/2023/10/IMG_20231023_143738-1024x554.jpg)
ಅ.9ರಂದು ಅಪರಿಚಿತ ವ್ಯಕ್ತಿಯೊಬ್ಬ ಉಷಾ ಅವರಿಗೆ ಕರೆಮಾಡಿ ಆನ್ ಲೈನ್ ಜಾಬ್ ಆಫರ್ ಕೊಟ್ಟಿದ್ದ. ಅದರಂತೆ ಉಷಾ ಅವರು ಕೆಲಸ ಪ್ರಾರಂಭಿಸಿದ್ದರು. ಆ ಬಳಿಕ ಅಪರಿಚಿತರು ಉಷಾ ಅವರಿಗೆ ವಿವಿಧ ಕಾರಣ ನೀಡಿ ಒಟ್ಟು ರೂ 4,25,934/ ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.