ಕರಾವಳಿ

ಸುಳ್ಯಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಜಯನಗರ, ಕಾರ್ಯದರ್ಶಿಯಾಗಿ ಗುರುರಾಜ್ ಅಜ್ಜಾವರ ಆಯ್ಕೆ



ಸುಳ್ಯದ ಯುವಜನ ಸಂಯುಕ್ತ ಮಂಡಳಿ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.21 ರಂದು ಮಂಡಳಿಯ ಸಭಾಂಗಣದಲ್ಲಿ ನಡೆಯಿತು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ವೇದಿಕೆಯಲ್ಲಿ ಇದ್ದರು.

ಗೌರವಾಧ್ಯಕ್ಷ ದಯಾನಂದ ಕೇರ್ಪಳ ‌ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಯುವ ಸಬಲೀಕರಣ ಕ್ರೀಢಾಧಿಕಾರಿ ದೇವರಾಜ್ ಮುತ್ಲಾಜೆ ಪದಗ್ರಹಣ ನೆರವೇರಿಸಿದರು.

ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಜಯನಗರ, ಕಾರ್ಯದರ್ಶಿಯಾಗಿ ಗುರುರಾಜ್ ಅಜ್ಜಾವರ , ಕೋಶಾಧಿಕಾರಿಯಾಗಿ ದಯಾನಂದ ಪಾತಿಕಲ್ಲು ಆಯ್ಕೆಯಾದರು.‌ ಉಪಾಧ್ಯಕ್ಷರುಗಳಾಗಿ ವಿಜಯಕುಮಾರ್ ಉಬರಡ್ಕ, ರಾಜೀವಿ ಲಾವಂತಡ್ಕ, ಜತೆಕಾರ್ಯದರ್ಶಿಯಾಗಿ ದಿನೇಶ್ ಹಾಲೆಮಜಲು, ಮತ್ತಿತರರ ಪದಾಧಿಕಾರಿಗಳು ಸಹಿತ 19 ಮಂದಿ ಆಯ್ಕೆಯಾದರು

ಕಾರ್ಯದರ್ಶಿ ಸಂಜಯ್ ನೆಟ್ಟಾರು ವರದಿ ಮಂಡಿಸಿದರು. ಕೋಶಾಧಿಕಾರಿ ಮುರಳಿ ನಳಿಯಾರು ಲೆಕ್ಕಪತ್ರ ಮಂಡಿಸಿದರು. ರಾಜೀವಿ ಗೋಳ್ಯಾಡಿ ಪ್ರಾರ್ಥನೆ ಮಾಡಿದರು. ನಮಿತಾ ಹಲ್ದಡ್ಕ ಸ್ವಾಗತಿಸಿದರು. ವಿಜಯ ಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!