ಪಣೆಮಜಲಿನಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಕ್ರೀಡಾ ಸ್ಪೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು– ಹೈದರ್ ಅಲಿ
ಪುತ್ತೂರು: ಕ್ರೀಡೆಗಳಲ್ಲಿ ನಾವು ಕಾಣುವ ಕೆಳಗೆ ಬಿದ್ದವರನ್ನು ಕೈ ಹಿಡಿದು ಮೇಲೆತ್ತುವ, ಧರ್ಮ- ಜಾತಿ ಭೇದವಿಲ್ಲದೆ ಒಂದು ತಂಡವಾಗಿ-ಗೆಲುವೇ ಮುಖ್ಯವಾಗಿ ಆಡುವ,ಸೋಲನ್ನು ಒಪ್ಪಿಕೊಳ್ಳುವ,ಗೆಲುವನ್ನು ಹಂಚಿಕೊಳ್ಳುವ ಗುಣಗಳನ್ನು ನಾವು ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು” ಎಂದು ಲೇಖಕ ಹೈದರ್ ಅಲಿ ಐವತ್ತೊಕ್ಲು ಹೇಳಿದರು.
![](https://newsbites.in/wp-content/uploads/2023/09/IMG-20230910-WA0140-300x169.jpg)
ಅವರು We Are Friends,ಪಣೆಮಜಲು ಇದರ ಆಶ್ರಯದಲ್ಲಿ ನಿನ್ನೆ ಪಣೆಮಜಲು ನಲ್ಲಿ ಜರುಗಿದ “ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ”ವನ್ನು ಉದ್ಘಾಟಿಸಿ ಮಾತನಾಡಿದರು.
![](https://newsbites.in/wp-content/uploads/2023/09/image_editor_output_image2035133088-1694429573400.jpg)
ಸ್ಥಳೀಯ ತಂಡಗಳ ನಡುವೆ ನಡೆದ ಪಂದ್ಯಕೂಟದಲ್ಲಿ “ಪಳ್ಳತಮೂಲೆ ಗೈಸ್” ಪ್ರಥಮ ಹಾಗೂ “ಕುಕ್ಕುಜೆ ಅಟ್ಯಾಕರ್ಸ್ “ದ್ವಿತೀಯ ಬಹುಮಾನ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಹಿರಿಯ ಆಟಗಾರ ಅಬ್ದುಲ್ ರಹಿಮಾನ್ ಸಮಹಾದಿ(ಅದ್ದು)ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
![](https://newsbites.in/wp-content/uploads/2023/09/image_editor_output_image-1964925381-1694429550946.jpg)
ಸಮಾರೋಪ ಸಮಾರಂಭದಲ್ಲಿ ಅಬ್ಬಾಸ್ ಆರ್ತಿಕೆರೆಯವರು ಬಹುಮಾನ ವಿತರಿಸಿದರು.
ಜಾಫರ್ ಹಾಜಿ ಬೇರಿಕೆ,ಉಮ್ಮರ್ ಕುಕ್ಕುಜೆ,ಸುಲೈಮಾನ್ ಪಳ್ಳತಮೂಲೆ, ಮಹಮ್ಮದ್ ಕುಂಞಿ ಬಾಬ ಮೊದಲಾದವರು ಉಪಸ್ಥಿತರಿದ್ದರು.
ವಿ.ಆರ್.ಫ್ರೆಂಡ್ಸ್ ನ ಸಮೀರ್ ಸಿರಾಜ್ ಸ್ವಾಗತಿಸಿ,ಇಬ್ರಾಹಿಂ ಪಣೆಮಜಲು ಧನ್ಯವಾದ ಸಮರ್ಪಿಸಿದರು.
ಮಹಮ್ಮದ್ ಫವಾಝ್,ಸಿದ್ದೀಕ್ ಪಳ್ಳತಮೂಲೆ, ಡಾ.ಮಹಮ್ಮದ್ ಅಲಿ,ಸ್ವಾಲಿಹ್ ಬೇರಿಕೆ ಮೊದಲಾದವರು ಸಹಕರಿಸಿದರು.