ರಾಜಕೀಯರಾಜ್ಯ

ಸಿದ್ದರಾಮಯ್ಯರಿಗೆ ಸತ್ಯವನ್ನು ಎದುರಿಸುವ ಧೈರ್ಯ ಇಲ್ಲ: ಸಚಿವ ಅಶ್ವತ್ಥನಾರಾಯಣ

‘ಸಿದ್ದು ನಿಜಕನಸು’ ಪುಸ್ತಕ ವೈಯಕ್ತಿಕ ತೇಜೋವಧೆಯ ಪುಸ್ತಕವಲ್ಲ. ರಾಜಕೀಯವಾಗಿ ಸಿದ್ದರಾಮಯ್ಯ ಅವರ ದ್ವಂದ್ವಗಳನ್ನು ಪ್ರಶ್ನಿಸುವ ಪುಸ್ತಕವಾಗಿತ್ತು. ಆ ಪುಸ್ತಕವನ್ನು ಓದದೇ ಸಿದ್ದರಾಮಯ್ಯ ಹೆದರಿ ಓಡಿ ಹೋಗಿ ನ್ಯಾಯಾಲಯದಿಂದ

Read More
ಕರಾವಳಿ

ಕಾವು ಬದ್ರಿಯಾ ಮಜ್ಲೀಸ್ ದಶವಾಷಿಕ, ಸನದುದಾನ ಮಹಾಸಮ್ಮೇಳನದ ಪೋಸ್ಟರ್ ಬಿಡುಗಡೆ

ಕಾವು ಬದ್ರಿಯಾ ಎಜುಕೇಶನಲ್ ಸೆಂಟರ್ ಇದರ ಬದ್ರಿಯಾ ಮಜ್ಲೀಸ್ ದಶವಾರ್ಷಿಕ, ಸನದುದಾನ ಮಹಾ ಸಮ್ಮೇಳನ, ಸಯ್ಯಿದ್ ಮುಹಮ್ಮದ್ ಹದ್ದಾದ್ ತಂಙಳ್ ರವರ ನಾಲ್ಕನೇ ಆಂಡ್ ನೇರ್ಚೆ ಕಾರ್ಯಕ್ರಮ

Read More
ಕರಾವಳಿಕ್ರೈಂ

ವಿಟ್ಲ: ವಿದ್ಯಾರ್ಥಿನಿ ಜತೆ ಬಸ್ಸಿನಲ್ಲಿ ಮಾತನಾಡಿದ ವಿಚಾರ: ಮುಸ್ಲಿಂ ವಿದ್ಯಾರ್ಥಿಗೆ ತಂಡದಿಂದ ಹಲ್ಲೆ

ವಿಟ್ಲ: ವಿದ್ಯಾರ್ಥಿನಿ ಜತೆ ಬಸ್ಸಿನಲ್ಲಿ ಮಾತನಾಡಿದ ವಿಚಾರವಾಗಿ ತಂಡವೊಂದು ಅನ್ಯ ಕೋಮಿನ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ

Read More
ರಾಷ್ಟ್ರೀಯ

ದ್ವೇಷ ಭಾಷಣ ಅಪಾಯಕಾರಿ: ಸುಪ್ರೀಂಕೋರ್ಟ್‌: ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ದೇಶಕ್ಕೆ ಬೇಕು

ನವದೆಹಲಿ: ದ್ವೇಷ ಭಾಷಣ ಅಪಾಯಕಾರಿಯಾಗಿದ್ದು ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ದೇಶಕ್ಕೆ ಬೇಕಾಗಿದೆ ಎಂದು ಸುಪ್ರೀಂಕೋರ್ಟ್‌ ಜ.13ರಂದು ಅಭಿಪ್ರಾಯಪಟ್ಟಿದೆ. ದೇಶದಾದ್ಯಂತ ದ್ವೇಷ ಭಾಷಣ ನಿಯಂತ್ರಣಕ್ಕೆ

Read More
ಜಿಲ್ಲೆರಾಜ್ಯ

ಕೊನೆಗೂ ಸ್ಯಾಂಟ್ರೋ ರವಿ ಅರೆಸ್ಟ್

ಬೆಂಗಳೂರು: ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ನನ್ನು ಪೊಲೀಸರು ಗುಜರಾತ್ ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ. ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸ್ಯಾಂಟ್ರೋ ರವಿಯ

Read More
ಕರಾವಳಿಕ್ರೈಂ

ಮಂಗಳೂರನ್ನು ಬೆಚ್ಚಿಬೀಳಿಸಿದ ಗಾಂಜಾ ಕೇಸ್..!
ಭೀತಿಯಿಂದ ಹಲವರು ಮಂಗಳೂರು ತೊರೆಯುತ್ತಿರುವ ಶಂಕೆ..?

ಮಂಗಳೂರು: ಗಾಂಜಾ ಕೇಸ್‌ನಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ಬಂಧನ ಹಿನ್ನೆಲೆ ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಬಂಧನ ಭೀತಿ ಹೆಚ್ಚಾಗಿದ್ದು ಅನೇಕ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮಂಗಳೂರು ತೊರೆದು ಕಾಲ್ಕಿತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಈಗಾಗಲೇ ಹಲವರ ಬಂಧನದಿಂದ ಆತಂಕಗೊಂಡಿರುವ ಅನೇಕರು ಮಂಗಳೂರು ಬಿಟ್ಟು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇರಿ ನಿನ್ನೆವರೆಗೂ 13 ಜನರ ಬಂಧನ ಆಗಿತ್ತು. ಇದರಲ್ಲಿ ಒಬ್ಬರು ವೈದ್ಯರು ಮನೆಯಲ್ಲಿ ಪಾರ್ಟಿ ಮಾಡಿ ಮಾದಕ ವಸ್ತು ಪೂರೈಸುತ್ತಿದ್ದರು. ಪಾರ್ಟಿಗೆ ಬರುವ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.  ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಲವರು ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಈ ಬಗ್ಗೆ ಚುರುಕಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದು ಇನ್ನಷ್ಟು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Read More
ಕರಾವಳಿರಾಜಕೀಯ

ಪುತ್ತೂರು: ಹಿಂದುತ್ವ ಎನ್ನುವುದು ಕುತ್ತಿಗೆಯ ಶಾಲಿನಲ್ಲಿ, ಹಣೆಯ ತಿಲಕದಲ್ಲಿ ಅಲ್ಲ -ಅನಂತ ಕುಮಾರ್ ಹೆಗಡೆ

ಪುತ್ತೂರು: ಹಿಂದುತ್ವ ಎನ್ನುವುದು ಕುತ್ತಿಗೆಯಲ್ಲಿ ಹಾಕುವ ಶಾಲಿನಲ್ಲಿ ಮತ್ತು ಹಣೆಯಲ್ಲಿರುವ ತಿಲಕದಲ್ಲಿ ಕಾಣಬಾರದು. ಬದಲಾಗಿ ನಮ್ಮ ಬದುಕಿನಲ್ಲಿ ಕಾಣಬೇಕು, ನಾಲಿಗೆ, ವಿಚಾರದಲ್ಲಿ ಕಾಣಬೇಕು. ಅದುವೇ ನಿಜವಾದ ಹಿಂದುತ್ವ ಎಂದು ಮಾಜಿ ಸಚಿವ, ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜ.12ರಂದು ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಒಳಗೊಂದು ಹೊರಗೊಂದು ಹಿಂದುತ್ವ ಇದ್ದರೆ ಅದು ನಿಜವಾದ ಹಿಂದುತ್ವ ಅಲ್ಲ. ಜಾತಿಯ ಗೂಡಿನಿಂದ ಹೊರಬರಲಾಗದವರು ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ. ಹಿಂದುತ್ವ ಎಂದರೆ ಭಾಷಣದ ಸರಕಲ್ಲ, ಅದೊಂದು ಬದುಕು ಎಂದು ಅವರು ಹೇಳಿದರು.  ಹಿಂದುತ್ವ, ಆಡಂಬರವನ್ನು ಒಪ್ಪುವುದಿಲ್ಲ ಎಂದ ಅವರು ಹಿಂದುತ್ವ ಎಂದರೆ ಏನು ಎಂಬುವುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು.  ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು.

Read More
ಕರಾವಳಿ

ಉಪ್ಪಿನಂಗಡಿ: ಹುಳ ಇದ್ದ ಚಿಕನ್ ಖಾದ್ಯ ನೀಡಿದ ಆರೋಪ- ಹೋಟೆಲ್ ನ್ನು ಮುಚ್ಚಿಸಿದ ಅಧಿಕಾರಿಗಳು

ಉಪ್ಪಿನಂಗಡಿ: ಗ್ರಾಹಕರಿಗೆ ಹುಳವಿದ್ದ ಚಿಕನ್ ಖಾದ್ಯವನ್ನು ನೀಡಿದ್ದಾರೆಂಬ ಆರೋಪದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಪುತ್ತೂರು ತಹಶೀಲ್ದಾರ್ ನೇತೃತ್ವದ ತಂಡ ದಾಳಿ

Read More
ಕರಾವಳಿ

ದೇವರಕೊಲ್ಲಿ ಸಮೀಪ ವ್ಯಾನ್-ಕಾರು ಡಿಕ್ಕಿ, ಹಲವರಿಗೆ ಗಾಯ-ಸುಳ್ಯ ಆಸ್ಪತ್ರೆಗೆ ದಾಖಲು

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವ್ಯಾನ್ ದೇವರಕೊಲ್ಲಿ ಸಮೀಪ ಕಾರೊಂದಕ್ಕೆ ಡಿಕ್ಕಿ ಹೊಡೆದು ಹಲವರು ಗಾಯಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ. ಎಮ್ಮೆಮಾಡು ಪುಣ್ಯ ಸ್ಥಳವನ್ನು ಸಂದರ್ಶಿಸಿ

Read More
ಜಿಲ್ಲೆ

ಸಾಕಾನೆ ಮೇಲೆ ಕಾಡಾನೆ ದಾಳಿ: ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಮದವೇರಿದ ಕಾಡಾನೆ ದಾಳಿ ಮಾಡಿದ ಪರಿಣಾಮ ಸಾಕಾನೆ ತೀವ್ರ ಗಾಯಗೊಂಡ ಘಟನೆ ಜನವರಿ 12ರಂದು ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ. ಘಟನೆಯಿಂದ ಶಿಬಿರದ ಗೋಪಿ ಎಂಬ ಸಾಕಾನೆ

Read More
error: Content is protected !!