ಕರಾವಳಿಕ್ರೈಂ

ಬೆಳ್ತಂಗಡಿ: ಮರ ಕಡಿಯುತ್ತಿದ್ದ ವೇಳೆ ಮರದ ತುಂಡು ತಲೆಗೆ ಬಿದ್ದು ಮಹಿಳೆ ಮೃತ್ಯು

ಮರ ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದ ತುಂಡು ತಲೆಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳದ ಕೊಕ್ಕಡ ಎಂಬಲ್ಲಿ ನಡೆದಿದೆ.

ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಎಂಬವರು ಕ್ವಾರ್ಟರ್ಸ್ ಬಳಿ ಮರದ ಗೆಲ್ಲು ಕಡಿಯುತ್ತಿರುವ ಸಂದರ್ಭ
ಗಾಯತ್ರಿಯವರ ತಲೆಗೆ ಆಕಸ್ಮಿಕವಾಗಿ ಮರದ ತುಂಡು ಬಂದು ಅಪ್ಪಳಿಸಿದೆ. ಘಟನೆಯಿಂದಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!