ಹಿಂದುತ್ವಕ್ಕಾಗಿ ಪುತ್ತಿಲ ಏನೂ ಮಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್
ಪುತ್ತೂರಿನಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ದಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಹಿಂದುತ್ವಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ, ಗೋಸಾಗಾಟದ ವೇಳೆ ಎಲ್ಲರೂ ಇರುವಾಗ ಗುಂಪಿನ ಮುಂದೆ ನಿಂತಿರಬಹುದು. ಅವರದು ಯಾವ ರೀತಿಯ ಹಿಂದುತ್ವ ಎಂದು ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನಿಸಿದರು.
ಹಿಂದೂಗಳಿಗೆ ಹೊಡೆದವರು, ದೇವಸ್ಥಾನದ ಹಣ ಹೊಡೆದವರು ಯಾವ ಸೀಮೆಯ ಹಿಂದುತ್ವದವರು ಎಂದು ಭಟ್ ಖಾರವಾಗಿ ಪ್ರಶ್ನಿಸಿದ್ದಾರೆ.
ಅಮಿತ್ ಷಾ ಮಾತನ್ನು ಧಿಕ್ಕರಿಸಿದ ವ್ಯಕ್ತಿ ಹಿಂದುತ್ವಕ್ಕೆ ಏನು ಮಾಡಬಹುದು ಎಂದು ಖಾರವಾಗಿ ಪ್ರಶ್ನಿಸಿರುವ ಭಟ್ ಬಿಜೆಪಿಗಿಂತ ದೊಡ್ಡ ಹಿಂದುತ್ವ ಯಾವುದೂ ಇಲ್ಲ. ವಿಶ್ವವೇ ಬಿಜೆಪಿಯನ್ನು ಹಿಂದುತ್ವದ ಪಾರ್ಟಿ, ಕಮ್ಯೂನಲ್ ಪಾರ್ಟಿ ಎಂದು ಹೇಳುತ್ತಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.