ಕರಾವಳಿ

ಅಂಬೇಡ್ಕರ್ ರಕ್ಷಣಾ ವೇದಿಕೆ ಗುತ್ತಿಗಾರು ಘಟಕ ಉದ್ಘಾಟನೆ



ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಚತ್ರಪ್ಪಾಡಿ ಬಾಲಕೃಷ್ಣ ಇವರ ಮನೆಯ ವಠಾರದಲ್ಲಿ ಆಗಸ್ಟ್ 20ರಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಗುತ್ತಿಗಾರು ಗ್ರಾಮ ಘಟಕವನ್ನು ಗಂಗಾಧರ ಚತ್ರಪ್ಪಾಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಅವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂಘಟನೆಯ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಅಧ್ಯಕ್ಷರಾದ ರಮೇಶ ಕೊಡಂಕಿರಿ ವಹಿಸಿಕೊಂಡಿದ್ದರು. ಗುತ್ತಿಗಾರು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ವಿಶ್ವನಾಥ ಚತ್ರಪ್ಪಾಡಿ, ಉಪಾಧ್ಯಕ್ಷರಾಗಿ ದಿವಾಕರ ಚತ್ರಪ್ಪಾಡಿ, ಕಾರ್ಯದರ್ಶಿಯಾಗಿ ವಸಂತ ಚತ್ರಪ್ಪಾಡಿ ಜೊತೆ ಕಾರ್ಯದರ್ಶಿ ಪ್ರಕಾಶ್ ಚತ್ರಪ್ಪಾಡಿ ಮತ್ತು ಬಾಲಕೃಷ್ಣ ಚತ್ರಪ್ಪಾಡಿ, ಮಹಿಳಾ ಅಧ್ಯಕ್ಷರಾಗಿ ರಮಿತಾ ಅಚಳ್ಳಿ, ಉಪಾಧ್ಯಕ್ಷರಾಗಿ ಸೀತಮ್ಮ ಚತ್ರಪ್ಪಾಡಿ, ಕಾರ್ಯದರ್ಶಿ ಪೂರ್ಣಿಮ ಚತ್ರಪ್ಪಾಡಿ ಇವರನ್ನೆಲ್ಲ ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕುಞಪ್ಪ ಚತ್ರಪ್ಪಾಡಿ, ಚಂದ್ರಶೇಖರ ಚತ್ರಪ್ಪಾಡಿ, ಪ್ರದೀಪ್ ಚತ್ರಪ್ಪಾಡಿ, ಪ್ರಜ್ವಲ್ ಚತ್ರಪ್ಪಾಡಿ, ನೇತ್ರಾವತಿ ಚತ್ರಪ್ಪಾಡಿ, ಚಂದ್ರಶೇಖರ ಕಮಿಲ, ಚಂದ್ರಾವತಿ ಚತ್ರಪ್ಪಾಡಿ ಉಪಸ್ಥಿತರಿದ್ದರು. ದಿವಾಕರ ಚತ್ರಪ್ಪಾಡಿ ಸ್ವಾಗತಿಸಿ ವಂದಸಿದರು.

Leave a Reply

Your email address will not be published. Required fields are marked *

error: Content is protected !!