ಸುಳ್ಯ: ಬಿಳಿಯಾರಿನಲ್ಲಿ ನೇಣು ಬಿಗಿದು ಬಾಲಕ ಆತ್ಮಹತ್ಯೆ
ಸುಳ್ಯ: ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡು ಗ್ರಾಮದ ಬಿಳಿಯಾರು ನಲ್ಲಿ ವರದಿಯಾಗಿದೆ.

ಅರಂತೋಡು ಗ್ರಾಮದ ಬಿಳಿಯಾರು ದಿ.ಮೂಸಾ – ಸೆಮೀರಾ ದಂಪತಿಗಳ ಪುತ್ರ ಹನ್ಸೀರ್ (17. ವ) ಎಂಬ ಯುವಕ ಮನೆಯೊಳಗೆ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಸೀರ್ ಅವರ ತಾಯಿ ಮತ್ತು ಮನೆಯವರು ಎರ್ನಾಕುಲಂ ಗೆ ಹೋಗಿದ್ದ ವೇಳೆ ಮನೆಯಲ್ಲಿ ಈತ ಒಬ್ಬನೆ ಇದ್ದನು. ಸಂಜೆ ಅರಂತೋಡಿನ ತನ್ನ ಅಜ್ಜಿಗೆ ಹೋಗಿ ಮಾತನಾಡಿ ಮನೆಗೆ ಬಂದಿದ್ದ ಎನ್ನಲಾಗಿದೆ. ರಾತ್ರಿ ತಾಯಿ ಫೋನ್ ಮಾಡಿ ಮಾತನಾಡಿದ್ದು ಬಳಿಕ ತಾಯಿ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಅರಂತೋಡಿನ ಅಜ್ಜಿ ಮನೆಗೆ ಫೋನ್ ಮಾಡಿ ಹಂಸೀರ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಹೇಳಿದರು. ಆತನ ಮಾವ ಬಿಳಿಯಾರಿಗೆ ಬಂದು ನೋಡಿದಾಗ ಈತ ಫ್ಯಾನಿಗೆ ನೇಣು ಹಾಕಿರುವುದು ಕಂಡು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.