ಸಂಪ್ಯ ನಿವಾಸಿ ಉಸ್ಮಾನ್ ಸುಳ್ಯದಲ್ಲಿ ಕೊಲೆ: ಬೆಚ್ಚಿ ಬೀಳಿಸಿದ ಸಹೋದರರ ಕೃತ್ಯ
ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಸಹೋದರರಿಂದಲೇ ಅಣ್ಣ ಕೊಲೆಯಾದ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಬಳಿಯ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ವರದಿಯಾಗಿದ್ದು ಮೃತ ವ್ಯಕ್ತಿಯನ್ನು ಸಂಪ್ಯ ನಿವಾಸಿ ಉಸ್ಮಾನ್ ಎಂದು ತಿಳಿದು ಬಂದಿದೆ.
ಅರಂತಡ್ಕ ನಿವಾಸಿ ಉಸ್ಮಾನ್ ಮೃತಪಟ್ಟವರು. ಸತ್ತಾರ್, ರಫೀಕ್ ಆರೋಪಿಗಳು.
ಅಣ್ಣತಮ್ಮಂದಿರಾದ ಉಸ್ಮಾನ್, ಸತ್ತಾರ್, ರಫೀಕ್, ಇಸುಬು, ಅಬ್ಬಾಸ್ ಸಹೋದರರಿಗೆ ಸೇರಿದ ಸುಮಾರು 50 ಎಕರೆ ಕೃಷಿ ಭೂಮಿ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿತ್ತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಹೋದರರು ಸೇರಿ ಉಸ್ಮಾನ್ ಅವರನ್ನು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಘಟನೆಯಿಂದ ಸ್ಥಳೀಯ ಜನರು ಬೆಚ್ಚಿ ಬಿದ್ದಿದ್ದಾರೆ.