ಬೈತಡ್ಕ ಮಸೀದಿ, ದರ್ಗಾ ಶರೀಫ್ ಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಸುಳ್ಯ ಶಾಸಕರಿಗೆ ಮನವಿ
ಪುತ್ತೂರು: ದ.ಕ ಜೆಲ್ಲೆಯ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಬೈತಡ್ಕ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಜಮಾಅತ್ ಸದಸ್ಯರಾದ ಅಬ್ದುಲ್ ರಹಿಮಾನ್ ಸಮಹಾದಿ ಮತ್ತು ಮುಸ್ಲಿಂ ಯೂತ್ ಫಡೇರೇಶನ್ (MYF )ಸದಸ್ಯರಾದ ಸುಲೈಮಾನ್ ಬೆದ್ರಾಜೆ, ಆಸೀಫ್ ಚೆಡವು, ಶಫ್ವಾನ್ ಕಾಯಿಮನ, ಸೈಫುದ್ದಿನ್ ಸಮಹಾದಿ ಮೊದಲಾದವರು ಮನವಿ ಸಲ್ಲಿಸಿದರು.