ಮಹಿಳೆಯರಿಗೆ ದೇವಸ್ಥಾನ ಭೇಟಿ ಅವಕಾಶ ಕಲ್ಪಿಸಿದ ಕಾಂಗ್ರಸ್ಸಿನದ್ದೇ ನಿಜವಾದ ಹಿಂದುತ್ವ: ಅಶೋಕ್ ರೈ
ಪುತ್ತೂರು: ರಾಜ್ಯದ ಪ್ರತೀ ಮಹಿಳೆಯರಿಗೆ ಜಾತಿ, ಮತ, ಧರ್ಮಗಳ ವೆತ್ಯಾಸವಿಲ್ಲದೆ ಅವರವರು ನಂಬುವ ದೇವರ, ತೀರ್ಥ ಸ್ಥಳಗಳ ಯಾತ್ರೆಗೆ ಉಚಿತ ಬಸ್ ಮೂಲಕ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ಸ್ ನಿಜವಾದ ಹಿಂದುತ್ವ ಪಕ್ಷವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಹಿರೆಬಂಡಾಡಿಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ. ಸರಕಾರದ ಐದು ಗ್ಯಾರಂಟಿ ಜನರನ್ನು ಸಂತೋಷದಿಂದ ಇರುವಂತೆ ಮಾಡಿದೆ. ಉಚಿತ ಸರಕಾರಿ ಬಸ್ ಯೋಜನೆಯಿಂದ ರಾಜ್ಯದ ಮಹಿಳೆಯರು ಸಂತುಷ್ಟರಾಗಿದ್ದು ಇಂದು ರಜ್ಯದ ಪ್ರತೀಯೊಂದು ದೇವಾಲಯ, ಮಸೀದಿ, ಚರ್ಚುಗಳು ಭಕ್ತರಿಂದ ತುಂಬು ತುಳುಕುತ್ತಿದೆ. ಮಹಿಳೆಯರಿಗೆ ದೇವರ ದರ್ಶನದ ಭಾಗ್ಯವನ್ನು ಕರುಣಿಸಿದಂತಾಗಿದೆ ಇದುವೇ ನಿಜವಾದ ಹಿಂದುತ್ವ, ಇನ್ನೊಬ್ಬರಿಗೆ ಅನ್ಯಾಯ ಮಾಡುವುದು, ಗಲಭೆ ಎಬ್ಬಿಸಿ ಜನರ ಮಧ್ಯೆ ವೈರತ್ವವನ್ನು ತರುವುದು ಹಿಂದುತ್ವವಲ್ಲ ಎಂದು ಅಶೋಕ್ ರೈ ಹೇಳಿದರು.
