ಕರಾವಳಿ

ಸುಳ್ಯ: ಪ್ರಥಮ ಮಳೆಗೆ ಅಲ್ಲಲ್ಲಿ ದುರ್ಘಟನೆ, ಮಳೆ ನೀರಿಗೆ ಸ್ಕಿಡ್ ಆಗಿ 2 ಕಡೆ ವಾಹನ ಅಪಘಾತ, ಗಾಳಿಗೆ ಮನೆಯ ಮೇಲೆ ಬಿದ್ದ ಮರದ ಕೊಂಬೆ

ಸುಳ್ಯದಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ತಾಲೂಕಿನ ಕೆಲವೆಡೆ ವಾಹನ ಅಪಘಾತ ಉಂಟಾದರೆ, ಬೆಳ್ಳಾರೆ ಪೇಟೆಯಲ್ಲಿ ಮಳೆ ನೀರು ರಸ್ತೆಯಲ್ಲಿ ತುಂಬಿ ಸಂಚಾರಕ್ಕೆ ಕೆಲ ಸಮಯ ಆಡಚಣೆ ಉಂಟಾದ ಬಗ್ಗೆ ವರದಿಯಾಗಿದೆ. ಅದೇ ರೀತಿ ಸುಳ್ಯ ನಗರದ ಕಲ್ಲುಮುಟ್ಟು ಪರಿಸರದಲ್ಲಿ ಮನೆಯೊಂದರ ಮೇಲೆ ಮರದ ಗೊಂಬೆ ಮುರಿದುಬಿದ್ದು ಅಲ್ಪ ಪ್ರಮಾಣದಲ್ಲಿ ಮನೆಗೆ ಹಾನಿಯಾದ ಘಟನೆಯು ನಡೆದಿದೆ.

ಜಾಲ್ಸೂರು ಅಯ್ಯಪ್ಪ ಮಂದಿರದ ಬಳಿ ಮಂಗಳೂರಿನಿಂದ ಮಡಿಕೇರಿ ಕಡೆ ಹೋಗುತ್ತಿದ್ದ ವ್ಯಾಗನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಘಟನೆಯಿಂದ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ದಂಪತಿಗಳು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.

ಅದೇ ರೀತಿ ಅರಂತೋಡು ಸಮೀಪ ಕುಶಾಲನಗರದಿಂದ ಮಂಗಳೂರು ಕಡೆ ಬರುತ್ತಿದ್ದ ಲಾರಿಯೊಂದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಸೈಡ್ ಕೊಡಲು ಹೋಗಿ ಲಾರಿ ಚಾಲಕನ ನಿಯಂತ್ರಣದಲ್ಲಿ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಲಾರಿ ಚಾಲಕನಿಗೆ ಮತ್ತು ಕಾರಿನ ಚಾಲಕನ ನಡುವೆ ವಾಗ್ವಾದ ನಡೆದಿದ್ದು ಕಾರಿನಲ್ಲಿದ್ದವರು ಲಾರಿ ಚಾಲಕನಿಗೆ ಥಳಿಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!