ಕರಾವಳಿರಾಜಕೀಯ

ಅಭಿವೃದ್ಧಿ ಕುಂಠಿತ; ಈಡೇರದ ಬೇಡಿಕೆ-ಪುತ್ತೂರು: ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯ ರಾಜೀನಾಮೆ



ಪುತ್ತೂರು: ತಾನು ಪ್ರತಿನಿಧಿಸುವ ವಾರ್ಡ್‌ನ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ, ಗ್ರಾ.ಪಂ.ನಿಂದ ಯಾವುದೇ ರೀತಿಯ ಅನುದಾನವಾಗಲೀ, ಸಹಕಾರವಾಗಲೀ ಸಿಗುತ್ತಿಲ್ಲ ಎಂದು ಬೇಸತ್ತು ಮುಂಡೂರು ಗ್ರಾ.ಪಂ ಸದಸ್ಯ ದುಗ್ಗಪ್ಪ ಕಡ್ಯ ಎಂಬವರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ದುಗ್ಗಪ್ಪ ಅವರು ಪ್ರತಿನಿಧಿಸುವ ವಾರ್ಡ್ ಅಭಿವೃದ್ಧಿ ಆಗದ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿರುವ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ.

ಕಾಂಕ್ರೀಟ್ ರಸ್ತೆ, ಟ್ರಾನ್ಸ್‌ಫಾರ್ಮರ್, ಬೀದಿ ದೀಪ ಸೇರಿದಂತೆ ಯಾವೊಂದು ಅಭಿವೃದ್ಧಿ ಕಾಮಗಾರಿಗಳೂ ದುಗ್ಗಪ್ಪ ಅವರ ವಾರ್ಡ್‌ನಲ್ಲಿ ಆಗದ ಕಾರಣಕ್ಕೆ ಅವರು ರಾಜೀನಾಮೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಗ್ರಾ.ಪಂ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಕೆಯಾಗಿದ್ದು ರಾಜೀನಾಮೆ ಅಂಗೀಕಾರ ಆಗುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!