ಸುಳ್ಯ: ಕುರುಂಜಿಭಾಗ್ ಬಳಿ ಅಪಾಯವನ್ನು ಆಹ್ವಾನಿಸುತ್ತಿರುವ ಚರಂಡಿ ಸ್ಲ್ಯಾಬ್
ಪಾದಾಚಾರಿಗಳೇ ಇಲ್ಲಿ ನಡೆದಾಡುವಾಗ ಎಚ್ಚರ..!
ಸುಳ್ಯ ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಕುರುಂಜಿ ಬಾಗ್ ಬಳಿ ನ್ಯಾಯಾಧೀಶರ ಹಳೆ ವಸತಿಗೃಹದ ಸಮೀಪ ರಸ್ತೆ ಬಳಿ ಇರುವ ಚರಂಡಿಯ ಮೇಲ್ಚಾವಣಿಗಳು ಸಂಪೂರ್ಣವಾಗಿ ಒಡೆದು ಹೋಗಿದ್ದು ಬೃಹತ್ ರಂದ್ರಗಳು ಸೃಷ್ಟಿಯಾಗಿದೆ.
ಈ ಭಾಗದಲ್ಲಿ ಕೆವಿಜಿ ಕ್ಯಾಂಪಸ್ಗಳು ಇದ್ದು ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯಲ್ಲಿ ನಡೆದಾಡುತ್ತಿರುತ್ತಾರೆ.
ರಸ್ತೆಯಲ್ಲಿ ವಾಹನಗಳು ಬರುವ ಸಂದರ್ಭ ಕಣ್ತಪ್ಪಿ ಫುಟ್ಪಾತಿನ ಮೇಲೆ ಜನರು ಬಂದರೆ ಈ ಸ್ಲಾಬ್ಗಳ ಬೃಹತ್ ರಂದ್ರಗಳಲ್ಲಿ ಕಾಲುಗಳು ಸಿಲುಕಿ ಕೊಳ್ಳುವುದು ಖಂಡಿತ. ಈ ಘಟನೆ ನಡೆದು ಅದೆಷ್ಟೇ ದಿನಗಳಾಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.