ಕರಾವಳಿ

ಬೆಳ್ಳಾರೆ: ತಂಬಿನಮಕ್ಕಿ ದಾರುಲ್ ಹುದಾ ಎಜುಕೇಶನ್ ಸೆಂಟರ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ



ಬೆಳ್ಳಾರೆ ತಂಬಿನಮಕ್ಕಿಯಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಹುದಾ ಎಜುಕೇಶನ್ ಸೆಂಟರ್ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.


ಸಂಸ್ಥೆಯ ಜನರಲ್ ಮ್ಯಾನೇಜರ್ ಖಲೀಲ್ ಹಿಮಿಮಿ ಸಖಾಫಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೂಸುಫ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಮಜೀದ್ ಝುಹ್ರಿ ಎಲಿಮಲೆ ಉದ್ಘಾಟಿಸಿದರು.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರವಾಗಿದೆ ಭಾರತ,ಸಂವಿಧಾನವನ್ನು ಕಾಪಾಡಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಮುಕ್ತಾರ್ ಹಿಮಮಿ ಸಖಾಫಿ ಸಂದೇಶ ಭಾಷಣವನ್ನು ನಡೆಸಿದರು.

ಸಂಸ್ಥೆಯ ಪ್ರೋತ್ಸಾಹಕರಾದ ಮೂಸಾ ವೆಲ್ಕಂ, ಯೂಸುಫ್, ಅಬ್ದುಲ್ಲ ಪಂಜಿಗಾರ್,ಸುಲೈಮಾನ್,ಶ ಮೀರ್,ಮುಹಮ್ಮದ್ ಐಫಾ ಸುಳ್ಯ,ಇಲ್ಯಾಸ್ ಹಿಮಾಮಿ,ಸಿದ್ದೀಕ್ ಹೀಮಾಮಿ, ಸಾಬೀತು, ಹಾಗೂ ಸಂಸ್ಥೆಯ ವಿಧಿಯಾರ್ಥಿಗಳು ಉಪಸ್ಥಿತರಿದ್ದರು.

ಕಬೀರ್ ಹಿಮಮಿ ಸಖಾಫಿ ಸ್ವಾಗತಿಸಿದರು. ರಿಝ್ವಾನ್ ಹಿಮಮಿ ಸಖಾಫಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!