ಕ್ರೈಂಜಿಲ್ಲೆರಾಜ್ಯ

ಫ್ಲೈ ಓವರ್‌ ಮೇಲೆ ನಿಂತು ನೋಟುಗಳನ್ನು ಎಸೆದಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ



ಬೆಂಗಳೂರು: ಕೆ.ಆರ್‌. ಮಾರ್ಕೆಟ್‌ ಬಳಿಯ ಫ್ಲೈ ಓವರ್‌ ಮೇಲಿಂದ ನೋಟುಗಳನ್ನು ಎಸೆದಿದ್ದ ಅರುಣ್‌ ಎಂಬಾತನನ್ನು ಕೆಆರ್ ಮಾರುಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಟಿ ಮಾರ್ಕೆಟ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್ ಅವರು ಆತನ ನಾಗರಬಾವಿಯಲ್ಲಿರುವ ಜಿ.ಟಿ. ಬಿಸಿನೆಸ್‌ ಕಚೇರಿಗೆ ಭೇಟಿ ನೀಡಿ ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿ ವಂದೇ ಮಾತರಂ ಸಮಾಜಸೇವಾ ಸಂಘಟನೆ ಸಿಟಿ ಮಾರ್ಕೆಟ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು.

‘ಕೊರಳಿಗೆ ಗಡಿಯಾರ ಧರಿಸಿದ್ದ ಅರುಣ್, ಏಕಾಏಕಿ ನೋಟುಗಳನ್ನು ಎರಚಿದ್ದು ಏಕೆ ಎಂಬ ಪ್ರಶ್ನೆ ಮೂಡಿತು. ಸ್ಥಳೀಯರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯೂಟ್ಯೂಬ್ ಚಾನೆಲ್‌ವೊಂದರ ಕಚೇರಿಯಲ್ಲಿದ್ದ ಆರೋಪಿ ಅರುಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!