ಕ್ರೈಂ

ರೈತ ಕುಟುಂಬದ ಮೇಲೆ ಮಾನಸಿಕ ಅಸ್ವಸ್ಥನಿಂದ ದಾಳಿ- ಕತ್ತು ಸೀಳಿ ಹತ್ಯೆ



ಕೆಲಸ ಮುಗಿಸಿ ವಾಪಸಾಗುತ್ತಿದ್ದ ರೈತ ಕುಟುಂಬದ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ದಾಳಿ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥ ರೈತನೊಬ್ಬನ ತಲೆ ಕತ್ತರಿಸುವುದರ ಜತೆಗೆ ರೈತನ ಮಗನ ಮೇಲೂ ಹಲ್ಲೆ ನಡೆಸಿದ್ದು ತಮಿಳುನಾಡಿನ ತಿರುಚ್ಚಿಯಲ್ಲಿ ಈ ಘಟನೆ ನಡೆದಿದೆ.

ಘಟನೆ ನಡೆದಾಗ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಕೂಡ ಸ್ಥಳದಲ್ಲಿದ್ದರು. ಮೂರು ಮಂದಿಯು ಹೊಲದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದಾಗ ಆರೋಪಿ ಚೆನ್ನದೊರೈ ಎಂಬಾತ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಮಚ್ಚಿನಿಂದ ರೈತ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾನೆ, ಪೋಷಕರ ಎದುರು 34 ವರ್ಷದ ಮಗನ ಮೇಲೆ ದಾಳಿ ನಡೆಸಿದ್ದ, ಬಳಿಕ ಅವರ ತಂದೆ ದುರೌರಾಜ್ ಅವರ ಕತ್ತು ಸೀಳಿದ್ದಾನೆ ಎನ್ನಲಾಗಿದೆ.

ಉತ್ತಂದಂಪಟ್ಟಿಯ ಗೌಂಡರ್ ಸ್ಟ್ರೀಟ್ನಲ್ಲಿ ರೈತನ ತುಂಡರಿಸಿದ ತಲೆಯು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ,

Leave a Reply

Your email address will not be published. Required fields are marked *

error: Content is protected !!