ಕರಾವಳಿ

ಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ಪ್ರಕರಣ: ಆರೋಪಿಗಳೊಂದಿಗೆ ಸಂಚುಕೋರರನ್ನೂ ಬಂಧಿಸಲು ಎಸ್‌ಡಿಪಿಐ ಆಗ್ರಹ

ಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಯುವಕನನ್ನು ಸಂಘಪರಿವಾರದ ದುಷ್ಕರ್ಮಿಗಳು ಕಪೋಲಕಲ್ಪಿತ ಲವ್ ಜಿಹಾದ್ ವಿಚಾರವನ್ನು ಮುಂದಿಟ್ಟುಕೊಂಡು ಮಾರಣಾಂತಿಕವಾಗಿ ಗುಂಪು ಹಲ್ಲೆ ಮಾಡಿ ಕೊಲೆಯತ್ನ ನಡೆಸಿದ ಘಟನೆಯನ್ನು ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ‌ ಸಮಿತಿ ಕಾರ್ಯದರ್ಶಿ ರಫೀಕ್ ಎಂ.ಎ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಯುವತಿಯೊಂದಿಗೆ ತಿರುಗಾಟ ನಡೆಸಿದ್ದಾನೆ ಎಂಬ ಕಾರಣ ಇಟ್ಟುಕೊಂಡು ಯು.ಪಿ ಮಾದರಿಯಂತೆ ಸಂಘಪರಿವಾರದ ದುಷ್ಕರ್ಮಿಗಳು ಮನಬಂದಂತೆ ಮಾರಣಾಂತಿಕವಾಗಿ ಥಳಿಸಿ ಕೊಲೆಗೈಯ್ಯಲು ಯತ್ನಿಸಿದ ಘಟನೆಯು ಅತ್ಯಂತ ಖಂಡನೀಯ.ಅದಲ್ಲದೇ ಇದೊಂದು ಪೂರ್ವ ಯೋಜಿತ ಕೃತ್ಯವಾಗಿದ್ದು ಇವರ ಸಾಮಾಜಿಕ ಜಾಲತಾಣದಲ್ಲಿ ಇರುವ ಒಡನಾಟ ಅರಿತ ಹುಡುಗಿಯ ಕುಟುಂಬಸ್ಥರು ಸಂಘಪರಿವಾರದವರನ್ನು ಸೇರಿಸಿ ಹುಡುಗಿಯ ಮೂಲಕ ಸುಬ್ರಹ್ಮಣ್ಯಕ್ಕೆ ಕರೆಸಿ ಕೊಲೆಗೈಯ್ಯಲು ಯತ್ನಿಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ‌.
ಒಂದು ವೇಳೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಂದಿಗೆ ಈತ ತಿರುಗಾಟ ನಡೆಸಿದ್ದರೆ,ಪೋಲೀಸರು ಅದಕ್ಕಿರುವ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಿತ್ತು.ಅದು ಬಿಟ್ಟು ಸಂಘಪರಿವಾರದ ಭಯೋತ್ಪಾದಕರಿಗೆ ಹಲ್ಲೆ ನಡೆಸಲು ಅನುಮತಿ ನೀಡಿದವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.


ಒಂದು ವೇಳೆ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದು ಸಂಘಪರಿವಾರವಾದರೆ ಇಲ್ಲಿ ಪೋಲಿಸ್, ನ್ಯಾಯಾಲಯ, ಕಛೇರಿಗಳು ಯಾಕೆ? ದ.ಕ ಪೋಲಿಸ್ ಇಲಾಖೆ ಸಂಘಪರಿವಾರದ ಅಟ್ಟಹಾಸವನ್ನು ತಡೆಯಲು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂಬುದಕ್ಕೆ ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಇಂತಹ ಅನೈತಿಕ ಗೂಂಡಾಗಿರಿಯೇ ಉದಾಹರಣೆಯಾಗಿದೆ.
ಅದಲ್ಲದೇ ಇದೊಂದು ಬಿಜೆಪಿಯ ಚುನಾವಣಾ ಪೂರ್ವ ತಯಾರಿ ಎಂಬುದು ಗೊತ್ತಾಗುತ್ತದೆ. ಈ ಬಗ್ಗೆ ಎಸ್‌ಡಿಪಿಐ ನಿಯೋಗ ಹಲವಾರು ಬಾರಿ ಉನ್ನತ ಪೋಲಿಸ್ ಅಧಿಕಾರಿಗಳನ್ನು ಭೇಟಿ ಮಾಡಿದೆ,ಪತ್ರಿಕಾಗೋಷ್ಠಿಯು ನಡೆಸಿದೆ ಅದಲ್ಲದೇ ಹಲವು ಬಾರಿ ಪ್ರತಿಭಟನೆ ನಡೆಸಿ ಪೋಲಿಸ್ ಇಲಾಖೆಯನ್ನು ಎಚ್ಚರಿಸುವ ಕೆಲಸವನ್ನು ಮಾಡಿತ್ತು.ಆದರೆ ಪೋಲಿಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಸುರತ್ಕಲ್ ಜಲೀಲ್ ಹತ್ಯೆಯಾಗಿದೆ,ಇದು ಹೀಗೆ ಮುಂದುವರೆದರೆ ಇನ್ನು ಮುಂದಕ್ಕೆ ಯಾರ ಕೊಲೆ ನಡೆಯಲಿದೆಯೋ ಎಂಬ ಭಯ ಅಲ್ಪಸಂಖ್ಯಾತ ಸಮುದಾಯವನ್ನು ಆವರಿಸಿದೆ‌ ಎಂದು ಅವರು ತಿಳಿಸಿದ್ದಾರೆ.


ಹೀಗಾದರೆ ಅಲ್ಪಸಂಖ್ಯಾತ ಸಮುದಾಯ ನ್ಯಾಯಕ್ಕಾಗಿ ಯಾರ ಬಳಿ ತೆರಳಬೇಕು? ಅಥವಾ ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಯನ್ನು ಅವರೆ ಮಾಡಬೇಕಾದ ರೀತಿಯಲ್ಲಿಯೇ ಮಾಡಬೇಕಾ ಎಂಬುದನ್ನು ಪೋಲಿಸ್ ಇಲಾಖೆ ಸ್ಪಷ್ಟ ಪಡಿಸಬೇಕು ಎಂದಿರುವ ಅವರು
ಕೊಲೆ ಯತ್ನ ನಡೆಸಿದ ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವುದನ್ನು ಬಿಟ್ಟು ಕೌಂಟರ್ ಕೇಸ್ ಗಾಗಿ ಸಂತ್ರಸ್ತನ ವಿರುದ್ಧವೇ ಫೋಕ್ಸೋ ಕೇಸ್ ದಾಖಲು ಮಾಡಲಾಗಿದೆ.ಈ ಹಿಂದೆ ನಡೆದ ಇಂತಹ ಎಲ್ಲಾ ಅನೈತಿಕ ಗೂಂಡಾಗಿರಿಯ ಪ್ರಕರಣದಲ್ಲಿ ಪೋಲಿಸ್ ಇಲಾಖೆ ಇಂತಹದೆ ಕೇಸ್ ದಾಖಲಿಸಿ ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸಿದೆ ಎಂದು ಅವರು ಆರೋಪಿಸಿದ್ದಾರೆ.


ಪೋಲಿಸ್ ಉನ್ನತಾಧಿಕಾರಿಗಳು ಇಂತಹ ಅನೈತಿಕ ಗೂಂಡಾಗಿರಿಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಕೌಂಟರ್ ಕೇಸ್ ಗಾಗಿ ಅಮಾಯಕರು ಬಲಿಪಶುವಾಗದಂತೆ ಮತ್ತು ಈ ರೀತಿಯ ಗುಂಪು ಹಲ್ಲೆ ನಂತರ ಸಂತ್ರಸ್ತರ ವಿರುದ್ಧವೇ ಕೇಸ್ ಆಗ್ತಾ ಇದೆ,ಹಾಗಾಗಿ ಇದರ ಹಿಂದೆ ದೊಡ್ಡ ಷಡ್ಯಂತರ ಇರುವುದು ಸ್ಪಷ್ಟ.ಹಾಗಾಗಿ ಇದರ ಹಿಂದಿನ ಸಂಚುಕೋರರ ಮತ್ತು ಸೂತ್ರದಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಫೀಕ್ ಎಂ. ಎ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!